- Advertisement -
- Advertisement -
ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು- ನೂಜಿ-ಅಮೈ ಸಂಪರ್ಕ ರಸ್ತೆ ಕುಂಡಡ್ಕ ಕಿರುಸೇತುವೆ ಪ್ರಾಣಕ್ಕೆ ಕುತ್ತು ತರುತ್ತಿದೆ. ಕಿಂಡಿ ಅಣೆಕಟ್ಟು ಸಹಿತ ಕಿರಿದಾದ ಸೇತುವೆ ಜನರ ಜೀವಕ್ಕೆ ಆಪತ್ತು ತರುತ್ತಿದೆ. ಬೈಕ್ ಸವಾರರೊಬ್ಬರು ಕಿರು ಸೇತುವೆ ಮೇಲಿಂದ ಬಿದ್ದು ಗಾಯಾಗೊಂಡ ಘಟನೆ ನಡೆದಿದೆ.
ಆನ್ಲೈನ್ ಡೆಲಿವರಿ ಯುವಕ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಕಿರು ಸೇತುವೆ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಹೆಲ್ಮೆಟ್ ಇದ್ದುದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಲವು ಸಮಯಗಳ ಬೇಡಿಕೆಗೆ ಸ್ಪಂದಿಸದ ಜನಪ್ರತಿನಿಧಿಗಳು..!
ಇನ್ನು ಈ ಕಿರು ಸೇತುವೆಯಿಂದ ಆಗುವ ಅನಾಹುತಗಳ ಬಗ್ಗೆ ಸ್ಥಳೀಯರು ಜನಪ್ರತಿನಿಧಿಗಳಿಗೆ ದೂರು ನೀಡಿದ್ದಾರೆ. ಆದರೆ ಈ ಸಮಸ್ಯೆಗೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ. ಈ ಹಿಂದೆಯೂ ಇಲ್ಲಿ ಇಂತಹದ್ದೇ ಅನಾಹುತಗಳು ಸಂಭವಿಸಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
.
- Advertisement -