- Advertisement -
- Advertisement -
ಕಾಸರಗೋಡು: ಕೊರಗಜ್ಜನ ವೇಷ ಧರಿಸಿ ವಿವಾದಕ್ಕೆ ಕಾರಣನಾಗಿದ್ದ ವರನ ಮನೆ ಮೇಲೆ ದಾಳಿ ನಡೆದಿದ್ದು, ಗೇಟ್ ನ ಗೋಡೆಗೆ ಕಾವಿ ಬಣ್ಣ ಬಳಿಯಲಾಗಿದೆ ಎಂದು ತಿಳಿದು ಬಂದಿದೆ.
ಬೇಕೂರು ಅಗರ್ತಿಮೂಲೆಯಲ್ಲಿರುವ ಮನೆಗೆ ಕಲ್ಲೆಸೆಯಲಾಗಿದ್ದು, ಮುಂಭಾಗದ ಎರಡು ಕಿಟಿಕಿ ಗಾಜುಗಳು ಹುಡಿಯಾಗಿವೆ.
ಜ.17 ರಂದು ಮುಂಜಾನೆ ಬೈಕ್ ನಲ್ಲಿ ಬಂದ ಯಾರೋ ಕಿಡಿಗೇಡಿಗಳು ಕೃತ್ಯ ನಡೆಸಿದ್ದು, ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಮುಂಜಾನೆ ಶಬ್ದ ಕೇಳಿ ಮನೆಯಲ್ಲಿದ್ದವರು ಬೊಬ್ಬೆ ಹಾಕಿದಾಗ ಇಬ್ಬರು ಬೈಕ್ ನಲ್ಲಿ ಪರಾರಿಯಾಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳಿಗಾಗಿ ಮಂಜೇಶ್ವರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
- Advertisement -