- Advertisement -
- Advertisement -
ವಿಟ್ಲ: ದ.ಕ. ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಭಾರತೀಯ ಮಜ್ದೂರ್ ಸಂಘದ ವತಿಯಿಂದ ನೂತನ ಪದಾಧಿಕಾರಿ ಆಯ್ಕೆ ನಡೆಯಿತು.
ಈ ಪಟ್ಟಿಯಲ್ಲಿ ತಾಲೂಕು ಸಮಿತಿ ವಿಟ್ಲದಿಂದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸಂತೋಷ್ ಕೆಲಿಂಜ ಮತ್ತು ಸತೀಶ್ ಗೋಳ್ತಮಜಲು, ಜತೆ ಕಾರ್ಯದರ್ಶಿಯಾಗಿ ಅನಂತೇಶ್ ಕೆಲಿಂಜ ಇವರು ಆಯ್ಕೆಯಾಗಿದ್ದಾರೆ. ಇವರುಗಳಿಗೆ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ ಇದರ ವತಿಯಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
BMS ವಿಟ್ಲ ಅಧ್ಯಕ್ಷರಾದ ರಾಜೇಶ್. ವಿ. ಬೊಬ್ಬೆಕೇರಿ, BMS ವಿಟ್ಲ ಉಪಾಧ್ಯಕ್ಷರಾದ ನಾಗೇಶ್ ಸುವರ್ಣ, BMS ವಿಟ್ಲ ಪ್ರಧಾನ ಕಾರ್ಯದರ್ಶಿ, ಸಂದೇಶ್ ಕೆಲಿಂಜ, BMS ವಿಟ್ಲ ಕಾರ್ಯಾಲಯ ಕಾರ್ಯದರ್ಶಿ, ಪ್ರೀತಮ್ ಗೌಡ ದೇವಸ್ಯ ವಿಟ್ಲ ಹಾಗೂ ಜಯಪ್ರಸಾದ್ ಶೆಟ್ಟಿ ಕಲ್ಮಲೆ ಮತ್ತು ಪುಷ್ಪರಾಜ್ ಕಲ್ಮಲೆ ಉಪಸ್ಥಿತರಿದ್ದರು.
- Advertisement -