- Advertisement -
- Advertisement -
ವಿಟ್ಲ : ಶ್ರೀ ಭಗವತೀ ದೇವಸ್ಥಾನದಲ್ಲಿ 26 ನೇ ವರ್ಷದ ಪುನಃ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವವು ಫೆ. 19 ಮತ್ತು 20 ರಂದು ನಡೆಯಲಿದೆ.
ಫೆ. 19 ರಂದು ಸಂಜೆ ಗಂಟೆ 6 ರಿಂದ ಶ್ರೀ ಸಬ್ಬಣಕೋಡಿ ರಾಮ ಭಟ್ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು) ರವರ ನಿರ್ದೇಶನದಲ್ಲಿ ಶ್ರೀ ಯಕ್ಷಭಾರತ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಪೌರಾಣಿಕ ಯಕ್ಷಗಾನ ಬಯಲಾಟ ’ಶ್ರೀ ರಾಮಾನುಗ್ರಹ’ ನಡೆಯಲಿದೆ.
ಫೆ. 20 ರಂದು ಸಂಜೆ ಗಂಟೆ 6 ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಶ್ರೀ ಭಗವತೀ ಯುವಕ ಮಂಡಲ ಇವರ ಆಶ್ರಯದಲ್ಲಿ ಶ್ರೀ ಧರ್ಮಶಾಸ್ತ್ರ ಭಕ್ತವೃಂದ ಮತ್ತು ಆಪೆ ಚಾಲಕ, ಮಾಲಕರು ವಿಟ್ಲ ಇವರ ಸಹಕಾರದೊಂದಿಗೆ ’ನಾಗ ಸಂಜೀವನ’ ಯಕ್ಷಗಾನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -