- Advertisement -
- Advertisement -
ವಿಟ್ಲ: ಪುಚ್ಚಗುತ್ತು ಶ್ರೀ ಬ್ರಹ್ಮ ಮುಗೇರ, ಶ್ರೀ ಕೊರಗ ತನಿಯ ಹಾಗೂ ಪರಿವಾರ ದೈವಗಳಾದ ಧರ್ಮದೈವ, ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ ಇದೇ ಬರುವ ಮಾರ್ಚ್ 13 ರಿಂದ 15 ರ ವರೆಗೆ ನಡೆಯಲಿದೆ ಎಂದು ಪ್ರತಿಕಾ ಪ್ರಕಟನೆ ತಿಳಿಸಿದೆ.
ಮಾರ್ಚ್ 13 ಆದಿತ್ಯವಾರದಂದು, ಸಂಜೆ 6:30 ರಿಂದ ಚುಕ್ಕಿ ವಿಟ್ಲ ಹಾಗೂ ಊರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8 ರಿಂದ ಸ್ವರಾಂಜಲಿ ಸಂಗೀತ ಸಂಜೆ, ರಾತ್ರಿ 10 ಗಂಟೆಗೆ ಕಲ್ಲುರ್ಟಿ ಪಂಜುರ್ಲಿ ನೇಮ ನಡೆಯಲಿದೆ. 14ರ ಬೆಳಗ್ಗೆ ಬ್ರಹ್ಮ ಮುಗೇರ, ಕೊರಗ ತನಿಯ ದೈವಗಳಿಗೆ ನವ ಕಲಶಾಭಿಷೇಕ ಮತ್ತುತಂಬಿಲ ಸೇವೆ, ಸಂಜೆ 6:30 ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಇವರಿಂದ ಮಲ್ಲ ಸಂಗತಿಯೇ ಅತ್ತ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 10:30 ಕ್ಕೆ ಶ್ರೀ ಮುಗೇರ ದೈವಗಳ ಗರಡಿ ಇಳಿದು ತನ್ನಿಮಾಣಿಗ ದೈವದ ನೇಮ ನಡೆಯಲಿದೆ. ಮಾರ್ಚ್ 14 ರಂದು ಬೆಳಗ್ಗೆ 9 ಗಂಟೆಗೆ ಕೊರಗ ತನಿಯ ದೈವದ ನೇಮ ನಡೆಯಲಿದೆ.
- Advertisement -