- Advertisement -
- Advertisement -
ವಿಟ್ಲ: ಯುವಕ ಮಂಡಲ ವಿಟ್ಲ ಇದರ 2021-22ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಕುಡೂರು ಇವರು ಆಯ್ಕೆಯಾಗಿರುತ್ತಾರೆ.
ಗೌರವಾಧ್ಯಕ್ಷ ರಮೇಶ್ ಬಿ ಎಸ್, ಉಪಾಧ್ಯಕ್ಷರಾಗಿ ಜಗದೀಶ ವಿ ಆರ್ ಮತ್ತು ವಸಂತ ಶೆಟ್ಟಿ ಎರ್ಮೆನಿಲೆ ಕಾರ್ಯದರ್ಶಿ ಜನಾರ್ಧನ ಪದ್ಮಶಾಲಿ ಜತೆ ಕಾರ್ಯದರ್ಶಿ ಸುಧೀರ್ ಕೋಶಾಧಿಕಾರಿ ಗಂಗಾಧರ್ ಕ್ರೀಡಾ ಕಾರ್ಯದರ್ಶಿ ಅಶೋಕ ಮತ್ತು ದಿನೇಶ್ ಆಚಾರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾನಂದ ಗೌಡ ಸೇರಾಜೆ,
ಸುದರ್ಶನ ಪಡಿಯಾರ್, ಅಶೋಕ್ ಕುಮಾರ್ ಶೆಟ್ಟಿ, ಸೂರ್ಯ ಆಚಾರ್, ಅಶೋಕ ವಿಟ್ಲ, ಸುರೇಶ್ ಸಾಲಿಯಾನ್, ಅಬೂಬಕ್ಕರ್, ಲೋಕರಾಜ್ ವಿ ಎಸ್, ರಮೇಶ್ ಆಚಾರ್ಯ ಮತ್ತು ಆನಂದ ಇವರನ್ನು ಆಯ್ಕೆ ಮಾಡಲಾಯಿತು.
ಯುವಕ ಮಂಡಲದ ವತಿಯಿಂದ 44ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಮೊಸರು ಕುಡಿಕೆ ಉತ್ಸವವನ್ನು ಆ.31 ರಂದು ಸಾಕೇತಿಕವಾಗಿ ಆಚರಿಸಿ, ಶಿವಂ ಡ್ಯಾನ್ಸ್ ಅಕಾಡೆಮಿಯ ಸಹಯೋಗದೊಂದಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಸಲಾಗುತ್ತದೆ.
- Advertisement -