- Advertisement -
- Advertisement -
ವಿಟ್ಲ: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ತೊಂದರೆ ಉಂಟಾಗಿದೆ. ವಿಟ್ಲ ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿನ ಸೇತುವೆ ಬಳಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಇತ್ತೀಚಿಗಷ್ಟೇ ಪಂಚಾಯತ್ ಜೆಸಿಬಿಯಿಂದ ನೀರು ಹರಿಯಲು ಬೇಕಾದ ತಾತ್ಕಲಿಕ ಚರಂಡಿ ಮಾಡಿದ್ದಾರೆ. ಆದರೆ ಅದು ಅಸಮರ್ಪಕ ರೀತಿಯಲ್ಲಿ ನಡೆದಿದ್ದು ರಸ್ತೆಯಲ್ಲೇ ನೀರು ಹರಿದಾಡುತ್ತಿದೆ.
ಇಂದು ಬೆಳಗ್ಗೆ ಎರಡು ವಾಹನಗಳು ಕೆಟ್ಟಿ ನಿಂತು ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ರಸ್ತೆಯಲ್ಲೇ ಹೆಚ್ಚು ನೀರು ಹರಿಯುತ್ತಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
- Advertisement -