ವಿಶ್ವ ಹಿಂದು ಪರಿಷದ್, ಬಜರಂಗದಳ ವಿಟ್ಲ ಪ್ರಖಂಡ, ಶ್ರೀ ರಾಮೋತ್ಸವ ಸಮಿತಿ ವಿಟ್ಲ ಇದರ ವತಿಯಿಂದ ಶ್ರೀ ರಾಮನವಮಿಯ ಪ್ರಯುಕ್ತ, ಶ್ರೀ ರಾಮ ಭಜನಾಮೃತ ಕಾರ್ಯಕ್ರಮವು ಮೇ.1 ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಇಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ನಡೆಯಿತು.
ಮೇ.1ಆದಿತ್ಯವಾರದಂದು ಬೆಳಗ್ಗೆ 6 ರಿಂದ ಸಂಜೆ 6ವರೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಜನಾ ಕಾರ್ಯಕ್ರಮ ನೆರವೇರಲಿದೆ.
ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ. ಶ್ರೀ ಬಂಗಾರು ಅರಸರು, ವಿಟ್ಲ ಅರಮನೆ ಇವರು ದೀಪ ಪ್ರಜ್ವಲನೆ ಮಾಡಲಿರುವರು.
ಮಧ್ಯಾಹ್ನ 3:00 ರಿಂದ 6:00 ರವರೆಗೆ ಕುಣಿತ ಭಜನೆ, ಭಜನಾ ಮಂಗಳೋತ್ಸವ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕರು, ಶ್ರೀ ಸದಾಶಿವ ದೇವಸ್ಥಾನ, ಸಾಲೆತ್ತೂರುಇದರ ಟ್ರಸ್ಟಿಗಳು ಶ್ರೀ ಎ. ವಿಠಲ ಶೆಟ್ಟಿ, ಅಗಲ-ಬಾಳಿಕೆ ವಹಿಸಲಿದ್ದಾರೆ.
ವಿಶ್ವ ಹಿಂದು ಪರಿಷದ್ ಪುತ್ತೂರು ಜಿಲ್ಲಾ ಧರ್ಮಪ್ರಸಾರ ಪ್ರಮುಖ್ ಶ್ರೀ ಕೃಷ್ಣ ಉಪಾಧ್ಯಾಯ ಹಾಗೂ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ಮುರಳಕೃಷ್ಣ ಹಸಂತಡ್ಕ ಇವರು ಧಾರ್ಮಿಕ ಉಪನ್ಯಾಸ ನೀಡಲಿರುವರು. ಶ್ರೀ ಕೃಷ್ಣಯ್ಯ ಕೆ, ವಿಟ್ಲ ಅರಮನೆ (ಗೌರವಾಧ್ಯಕ್ಷರು ಶ್ರೀ ರಾಮೋತ್ಸವ ಸಮಿತಿ, ವಿಟ್ಲ) ಹಾಗೂ ಡಾ| ಕೃಷ್ಣ ಪ್ರಸನ್ನ (ಅಧ್ಯಕ್ಷರು ವಿಶ್ವ ಹಿಂದು ಪರಿಷದ್, ಪುತ್ತೂರು ಜಿಲ್ಲೆ) ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ರಾವಣ ದಹನ ನಡೆಯಲಿದೆ.
ಶ್ರೀ ರಾಮ ನವಮಿಯ ಪ್ರಯುಕ್ತ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಹಿಂದು ಸಮಾಜ ಪಾಲ್ಗೊಂಡು ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕಾಗಿ ವಿಶ್ವ ಹಿಂದು ಪರಿಷದ್, ಬಜರಂಗದಳ ವಿಟ್ಲ ಪ್ರಖಂಡ, ಶ್ರೀ ರಾಮೋತ್ಸವ ಸಮಿತಿ ವಿಟ್ಲ ಇದರ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ನೇರ ಪ್ರಸಾರವು ನಿಮ್ಮ ನೆಚ್ಚಿನ ವಿಟಿವಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.