ವಿಟ್ಲ: ಶೋಕಮಾತಾ ದೇವಾಲಯ ವಿಟ್ಲ ಇದರ ಶತಮಾನೋತ್ಸವ ಸ್ಮಾರಕ ಸಮುದಾಯ ಭವನದ ಉದ್ಘಾಟನೆಯು ದಿನಾಂಕ13-08-2022 ಶನಿವಾರ ಬೆಳಿಗ್ಗೆ ಕೃತಜ್ಞತಾ ಬಲಿಪೂಜೆ ನಡೆದ ನಂತರ ಉದ್ಘಾಟನೆ ಹಾಗೂ ಆಶೀರ್ವಚನ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಪೀಟರ್ ಪ್ಲಾವ್ ಸಲ್ಡಾನ್ಹಾ ಮಾಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂತ ರೀಟಾ ದೇವಾಲಯ, ಕಾಸ್ಸಿಯಾ ಧರ್ಮಗುರುಗಳಾದ ವ|ಫಾ ಎರಿಕ್ ಕ್ರಾಸ್ತ ವಹಿಸಿದ್ದರು.
ಅತಿಥಿಗಳಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕರಾದ ಜೆ.ಆರ್.ಲೋಬೋ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ರಮಾನಾಥ ರೈ, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳ ಶೆಟ್ಟಿ ಭಾಗವಹಿಸಿದ್ದರು.
ಧರ್ಮ ಗುರುಗಳಾದ ಫಾ. ಐವನ್ ಮೈಕಲ್ ರೊಡ್ರಿಗಸ್, ಚರ್ಚ್ಪಾಲನಾ ಸಮಿತಿ ಉಪಾಧ್ಯಕ್ಷರಾದ ಮನೋಹರ್ ಲ್ಯಾನ್ಸಿ ಡಿ’ಸೋಜ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಆರ್. ವಿಜಯ್ ಪಾೈಸ್, ಪಾಲನಾ ಆಯೋಗಗಳ ಸಂಯೋಜಕರು ಲುವೀಸ್ ಮುಸ್ಕರ್ಹೇನಸ್, ಸಮುದಾಯ ಭವನ ಕಟ್ಟಡ ಸಮಿತಿ ಸಂಚಾಲಕರು ಪೀಟರ್ ಲಸ್ರಾದೊ, ಆ್ಯಂಟನಿ ಲೋಬೊ, ಸಿಎಫ್ ಸಿಕ್ವೆರಾ, ಸಮುದಾಯ ಭವನ ಕಟ್ಟಡ ಸಮಿತಿ ಕಾರ್ಯದರ್ಶಿ ರೋಬರ್ಟ್ ಮಸ್ಕರ್ಹೇನಸ್ ಹಾಗೂ ಸಮಸ್ತ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.