- Advertisement -
- Advertisement -
ವಿಟ್ಲ : ದಿನಾಂಕ 08-05-2022 ನೇ ಆದಿತ್ಯವಾರ ಹಾಗೂ 09-05-2022ನೇ ಸೋಮವಾರ ಎರಡು ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀನಿಕೇತನ ಮಂದಿರದ ಲೋಕಾರ್ಪಣೆ ನಡೆಯಿತು.
ಶ್ರೀ ಗಣಪತಿ ಹವನ, ಭಜನೆ ಸಂಕೀರ್ತನೆ, ಭಜನೆ ಮಂಗಲೋತ್ಸವ, ಶ್ರೀನಿಕೇತನ ಮಂದಿರದ ಲೋಕಾರ್ಪಣೆ , ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ಯಕ್ಷಗಾನಾರ್ಚನೆ, ಕುಸಲ್ – ಎಸಲ್ ಕಲಾವಿದರ್ ಕೆಲಿಂಜ ಇವರಿಂದ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಸಂಬಂದ ದಾಯೆ …? ಪ್ರದರ್ಶನ ಗೊಂಡಿತು. ಊರಿನ ಹಾಗೂ ಪರವೂರಿನ ಜನರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ದಿನಾಂಕ 09-05-2022ರಂದು ಶ್ರೀ ಸತ್ಯನಾರಾಯಣ ಪೂಜೆ, ಸಮಾರೋಪ ಸಮಾರಂಭ, ಅನ್ನಸಂತರ್ಪಣೆ ಹಾಗೂ ವಿಜಯ ಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರಿಂದ “ಶಿವದೂತೆ ಗುಳಿಗೆ” ವಿಭಿನ್ನ ಶೈಲಿಯ ತುಳು ನಾಟಕ ನಡೆಯಿತು.
- Advertisement -