Tuesday, April 23, 2024
spot_imgspot_img
spot_imgspot_img

ವಿಟ್ಲ: ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. 6 ನೇ ಶಾಖೆಯ ಉದ್ಘಾಟನಾ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ನೂತನ 6 ನೇ ಶಾಖೆಯ ಉದ್ಘಾಟನಾ ಸಮಾರಂಭ ವಿಟ್ಲ ರಸ್ಕಿನ್ಹಾ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಈ ಹಿಂದೆ ಪಚ್ಚಿನಡ್ಕ, ಕಕ್ಯಪದವು, ಅಜಿಲಮೊಗರು, ಕಡೆಗೋಳಿ ಪ್ರದೇಶದಲ್ಲಿ ಒಟ್ಟು 5 ಶಾಖೆಗಳನ್ನು ತೆರೆದು ತಮ್ಮ ಉತ್ತಮ ಕಾರ್ಯವೈಖರಿಯೊಂದಿಗೆ ಜನರೊಂದಿಗೆ ಸಹಕರಿಸುತ್ತಿರುವ ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ 6 ನೇ ಶಾಖೆ ಇಂದು ವಿಟ್ಲದಲ್ಲಿ ಶುಭಾರಂಭಗೊಂಡಿತು.

ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಕಛೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ನೂತನ ಶಾಖೆಗೆ ಶುಭಹಾರೈಸಿದರು. ಭದ್ರತಾ ಕೋಶವನ್ನು ಹರೀಶ್ ಸಿ ಎಚ್ ಅಧ್ಯಕ್ಷರು ಬಿಲ್ಲವ ಸಂಘ (ರಿ) ವಿಟ್ಲ ಉದ್ಘಾಟಿಸಿ ಉದ್ಘಾಟನೆಗೊಂಡ ನೂತನ ಶಾಖೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಗಾರು ಅರಸರು ವಿಟ್ಲ ಅರಮನೆ, ಫಾ.ಸುನಿಲ್ ಪ್ರವೀಣ್ ಪಿಂಟೋ ಧರ್ಮಗುರುಗಳು ಸಂತ ಪೌಲರ ದೇವಾಲಯ ದೇಲಂತಬೆಟ್ಟು ಕನ್ಯಾನ ಬಿ ಸತೀಶ್ ಕುಮಾರ್ ಆಳ್ವ ಸಾಯಿಗಣೇಶ್ ಇಂಡೇನ್ ಗ್ಯಾಸ್ ಸರ್ವೀಸಸ್ ಕಡಂಬು ವಿಟ್ಲ, ಸುಭಾಷ್ಚಂದ್ರ ನಾಯಕ್, ಶ್ರೀನಿವಾಸ್ ಟ್ರೆರ‍್ಸ್ ಅರಮನೆ ರಸ್ತೆ ವಿಟ್ಲ, ಸಂಜೀವ ಪೂಜಾರಿ ನಿಡ್ಯ ಅಧ್ಯಕ್ಷರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ನಿ, ವಿಟ್ಲ, ರಮೇಶ್ ಅನ್ನಪ್ಪಾಡಿ ಉಪಾಧ್ಯಕ್ಷರು ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ., ಕೆ ಸಂಜೀವ ಪೂಜಾರಿ ನಿರ್ದೇಶಕರು ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ., ಜಗನ್ನಾಥ್ ಸಾಲ್ಯಾನ್ ಅಧ್ಯಕ್ಷರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್, ಮಹಮ್ಮದ್ ಇಕ್ಬಾಲ್, ಅಧ್ಯಕ್ಷರು ಕೇಂದ್ರ ಜುಮ್ಮಾ ಮಸೀದಿ ವಿಟ್ಲ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ನೂತನ ಶಾಖೆಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಠೇವಣಿ ಪತ್ರ ವಿತರಿಸಲಾಯಿತು. ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ನಿರ್ದೇಶಕ ರತ್ನಾಕರ ಪೂಜಾರಿ ವಂದಿಸಿದರು. ರಶ್ಮಿ ಪ್ರಾರ್ಥಿಸಿ, ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹೇಮಂತ್ ಕುಮಾರ್ ಶಾಖಾ ವ್ಯವಸ್ಥಾಪಕರು, ಪ್ರವೀಣ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಿರ್ದೇಶಕರುಗಳಾದ ಕೆ ಸೇಸಪ್ಪ ಕೋಟ್ಯಾನ್, ಕೆ ಸಂಜೀವ ಪೂಜಾರಿ, ಉಮೇಶ್ ಸುವರ್ಣ ತುಂಬೆ, ರತ್ನಾಕರ ಪೂಜಾರಿ ಮೆಲ್ಕಾರ್, ತುಳಸಿ ಇರಾ, ಲಕ್ಷ್ಮೀ ಪೆರ್ವ ಸೇರಿದಂತೆ ಸಾಖೆಯ ಸಿಬ್ಬಂದಿಗಳು, ನೂರಾರು ಜನರು ಪಾಲ್ಗೊಂಡಿದ್ದರು.

- Advertisement -

Related news

error: Content is protected !!