Sunday, May 5, 2024
spot_imgspot_img
spot_imgspot_img

ವಿಟ್ಲ: ಶ್ರೀ ಶಾರದಾಂಭ ಭಜನಾ ಮಂಡಳಿ ಅಶೋಕನಗರ ಇದರ ವಾರ್ಷಿಕೋತ್ಸದವದ ಅಂಗವಾಗಿ ನಗರ ಭಜನಾ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಶಾರದಾಂಭ ಭಜನಾ ಮಂಡಳಿ ಅಶೋಕನಗರ ಇದರ ವಾರ್ಷಿಕೋತ್ಸದವದ ಅಂಗವಾಗಿ ದಿನಾಂಕ 02-02-2023 ರಿಂದ ನಗರ ಭಜನಾ ಕಾರ್ಯಕ್ರಮವು ಪ್ರಾರಂಭವಾಯಿತು.

ಸಮಿತಿಯ ಗೌರವಾಧ್ಯಕ್ಷ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು ಪ್ರಾರ್ಥನೆ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿಯ ಅಧ್ಯಕ್ಷ ಜಗದೀಶ್ ಪೂಜಾರಿ ಅಳಕೆಮಜಲು ಮತ್ತು ಪದಾಧಿಕಾರಿಗಳು, ಮಹಿಳಾ ಸಮಿತಿ ಸದಸ್ಯರು ಭಜನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುಮಾರು 20 ದಿವಸಗಳಲ್ಲಿ ಇಡ್ಕಿದು-ಕುಳ ಗ್ರಾಮದ ಭಜನಾ ಮಂದಿರದ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಶ್ರೀದೇವಿಯ ಭಜನಾ ಆರಾಧನೆಯ ಮೂಲಕ ಪೂಜಾ ಕಾರ್ಯಕ್ರಮ ನಡೆಯಲಿರುವುದು. ಮಾರ್ಚ್ 05-03-2023 ರಂದು ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪೂರ್ವಹ್ನ 6 ರಿಂದ ಸಂಜೆ 6ರ ತನಕ ಅರ್ಧ ‌ಏಕಹಾ ಭಜನಾ ಕಾರ್ಯಕ್ರಮ ‌ನಡೆಯಲಿರುವುದು.

ಈ ಭಜನಾ ಕಾರ್ಯಕ್ರಮದ ವಿಶೇಷತೆ ಕುಟುಂಬ ಭಜನೆ ಭಜನಾ ಮಂದಿರದ ವ್ಯಾಪ್ತಿಯಲ್ಲಿ 10 ವಲಯಗಳನ್ನು ಮಾಡಿ ತಂಡ ರಚಿಸಿ ಆ ವ್ಯಾಪ್ತಿಗೆ ಭಜನಾ ಮಂದಿರದಲ್ಲಿ 1ಗಂಟೆಯ ಭಜನಾ ಸೇವೆ ಮಾಡಲು ವಿಶೇಷವಾಗಿ ಅವಕಾಶ ‌ಕಲ್ಪಿಸಿದೆ ಎಂದು ಸಂಘಟಕರು ‌ತಿಳಿಸಿದ್ದಾರೆ.

- Advertisement -

Related news

error: Content is protected !!