- Advertisement -
- Advertisement -
ವಿಟ್ಲ: ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಹೊರಬಿದ್ದಿದೆ. ಪ್ರಾಥಮಿಕ & ಪ್ರೌಡ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಫಲಿತಾಂಶ ಪ್ರಕಟಿಸಿದ್ದು, ಅಳಿಕೆ 100% ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ಜಯಂತ್ . ಪಿ 595 ಅಂಕ, ವಾಣಿಜ್ಯ ವಿಭಾಗದಲ್ಲಿ ಶ್ರೀಹರಿ ಬಿ.592 ಅಂಕ, ಕಲಾ ವಿಭಾಗದಲ್ಲಿ ಆಕಾಶ್ ಎಚ್ ಆರ್ 561 ಅಂಕಗಳನ್ನು ಗಳಿಸಿದ್ದಾರೆ.
ರಾಜ್ಯದಲ್ಲಿ ಏಪ್ರಿಲ್ 22 ರಿಂದ ಮೇ 18 ವರೆಗೆ ಪಿಯುಸಿ ಪರೀಕ್ಷೆ ನಡೆದಿತ್ತು. ದಕ್ಷಿಣ ಕನ್ನಡ ಪ್ರಥಮ ಸ್ಥಾನ. ಉಡುಪಿ ದ್ವಿತೀಯ ಸ್ಥಾನವಾಗಿ ಹೊರಹೊಮ್ಮಿದೆ. ಚಿತ್ರದುರ್ಗ ಕೊನೆ ಸ್ಥಾನ. ಈ ಬಾರಿಯೂ ವಿದ್ಯಾರ್ಥಿನಿಯರಂದೇ ಮೇಲುಗೈ. ಈ ಬಾರಿ ಒಟ್ಟು 599,794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 402,697 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ತಿಳಿಸಿದರು.
- Advertisement -