ವಿಟ್ಲ : ವಿಟ್ಲ ಸರಕಾರಿ ಪ್ರೌಢಶಾಲೆ (RMSA) -ಪ್ರಾಥಮಿಕ ವಿಭಾಗ ದಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರವು 22-05-2024 ರಂದು ನಡೆಯಿತು.
ಈ ಕಾರ್ಯಕ್ರಮವು ಬಿಂದು.ಜೆ CRP, ವಿಟ್ಲ ಇವರ ಪ್ರಾಸ್ತಾವಿಕ ಮಾತುಗಳ ಮೂಲಕ ಉದ್ಘಾಟನೆಗೊಂಡಿತು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸುಚಿತ್ರ ಶೆಟ್ಟಿ ಹಾಗೂ ಸವಿತಾ ಬಾಲಕೃಷ್ಣ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಗಾಯತ್ರಿ ಮತ್ತು ಕಾವ್ಯಶ್ರೀ ಗೌರವ ಶಿಕ್ಷಕರು ಪ್ರಾರ್ಥಿಸಿದರು. ಶಿಕ್ಷಕಿ ವಾರಿಜಾಕುಮಾರಿ ಸ್ವಾಗತಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ರವಿಶಂಕರ ಶಾಸ್ತ್ರೀ ಸಭಾ ಅಧ್ಯಕ್ಷತೆ ವಹಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗ ಮುಖ್ಯೋಪಾಧ್ಯಾಯಿನಿ ಫೆಲ್ಸಿಟಾಸ್ ಇವಾ ಗಲ್ಬಾವೋ, ಪ್ರಾಥಮಿಕ ವಿಭಾಗದ ಎಸ್.ಡಿ.ಎಮ್.ಸಿ ಸದಸ್ಯರುಗಳಾದ ರಾಜಶೇಖರ ಶೆಟ್ಟಿ, ವಾಸುದೇವ ಪ್ರಭು, ಅಶೋಕ ಮತ್ತು ಶಾಲೆಯ ಎಲ್ಲ ಸಹಶಿಕ್ಷಕರು, ಗೌರವ ಶಿಕ್ಷಕರು ಉಪಸ್ಥಿತರಿದ್ದರು. ಅತಿಥಿ ಶಿಕ್ಷಕರಾದ ರೇಷ್ಮಾ ಕಾರ್ಯಕ್ರಮ ನಿರೂಪಣೆ ಗೈದರೆ, ಭಾರತಿ ಆತಿಥಿ ಶಿಕ್ಷಕಿ ಧನ್ಯವಾದಗೈದರು.