Thursday, April 25, 2024
spot_imgspot_img
spot_imgspot_img

ವಿಟ್ಲ: ಹತ್ತು ದಿನ ನಡೆದ ರಾಜ್ಯಮಟ್ಟದ ಮಕ್ಕಳ ಉಚಿತ ಬೇಸಿಗೆ ಶಿಬಿರ ಚಿನ್ನರ ಉತ್ಸವದ ಸಮಾರೋಪ ಸಮಾರಂಭ

- Advertisement -G L Acharya panikkar
- Advertisement -

ಬಿಲ್ಲವ ಸಂಘ (ರಿ) ಇದರ ಸಂಭ್ರಮೋತ್ಸವ ಸಮಿತಿಯ ಆಶ್ರಯದಲ್ಲಿ ಆರ್ ಕೆ ಆರ್ಟ್ಸ್ ಚಿನ್ನರ ಮನೆ (ರಿ) ವಿಟ್ಲ ಇವರಿಂದ ದಕ್ಷಿಣ ಕನ್ನಡ ಮಾದರಿ ಶಾಲೆ ವಿಟ್ಲ ಸಹಯೋಗದಲ್ಲಿ ಪಂಚಲಿಂಗೇಶ್ವರ ಸದನ ದಲ್ಲಿ ಹತ್ತು ದಿನಗಳ ಕಾಲ ನಡೆದ ರಾಜ್ಯಮಟ್ಟದ ಮಕ್ಕಳ ಉಚಿತ ಬೇಸಿಗೆ ಶಿಬಿರ ಚಿನ್ನರ ಉತ್ಸವ ಸಮಾರೋಪ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ಸೀತಾರಾಮ ಕೆದಿಲಾಯ ಧಾರ್ಮಿಕ ಮುಖಂಡರು ವಹಿಸಿದರು. ಭಾರತ ದೇಶದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ದೇಶವಿದ್ದರೆ ನಾವು ಎಂದು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಕೃಷ್ಣಯ್ಯ ಕೆ ವಿಟ್ಲ ಅರಮನೆ, ಜಯರಾಮ್ ಬಳ್ಳಾಲ ವಿಟ್ಲ ಅರಮನೆ, ರಾಜೇಶ್ ವಿಟ್ಲ ಆರ್ ಕೆ ಕಲಾಸಂಸ್ಥೆ, ಬೆಳ್ಳಿ ಹಬ್ಬ ಸಂಭ್ರಮೋತ್ಸವ ಅಧ್ಯಕ್ಷರು ಡಾಕ್ಟರ್ ಗೀತ ಪ್ರಕಾಶ್, ಬಿಲ್ಲವ ಸಂಘದ ಅಧ್ಯಕ್ಷರು ಹರೀಶ್ ಪೂಜಾರಿ, ಬೆಳ್ಳಿಹಬ್ಬ ಸಮಿತಿಯ ಗೌರವಧ್ಯಕ್ಷರು ದಾಸ ಪೂಜಾರಿ, ಸರಿತಾ ರೂಪ ರಾಜ್ ಸಂಜೀವ ಪೂಜಾರಿ ಎಂ ಎಸ್, ಉದಯ ಸಾರಂಗ ರಂಗ ನಿರ್ದೇಶಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ನೂರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಶಿಬಿರದ ಉಪಯೋಗವನ್ನು ಪಡೆದುಕೊಂಡರು.

- Advertisement -

Related news

error: Content is protected !!