ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ವಿಟ್ಲ ಮೂಡ್ನೂರು ಗ್ರಾಮದಲ್ಲಿ 80 ಲಕ್ಷ ರೂಪಾಯಿಗಳ ರಸ್ತೆ ಅಭಿವೃದ್ಧಿಗಳಿಗೆ ಶಂಕುಸ್ಥಾಪನೆ, 30 ಲಕ್ಷ ರೂಪಾಯಿಗಳ ರಸ್ತೆ ಅಭಿವೃದ್ಧಿಗಳ ಲೋಕಾರ್ಪಣೆ ಹಾಗೂ ರೂಪಾಯಿ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಸಮೇತ ಸೇತುವೆಯನ್ನು ಲೋಕರ್ಪಣೆಗೊಳಿಸಿದರು. ಈ ವೇಳೆ ಫಲಾನುಭವಿಗಳಿಗೆ ಮನೆ ನಿರ್ಮಾಣ ಬಗ್ಗೆ ಆದೇಶ ಪತ್ರ ವಿತರಿಸಿದರು.
ಎಲ್ಲಾ ಕಾರ್ಯಕ್ರಮಗಳಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ಶೆಟ್ಟಿ ಉಜಿರೆಮಾರ್, ಸದಸ್ಯರಾದ ತೀರ್ಥರಾಮ ಗೌಡ, ಬಿಜೆಪಿ ವಿಟ್ಲ ಮುಡ್ನೂರು ಶಕ್ತಿ ಕೇಂದ್ರದ ಸಂಚಾಲಕ ಪಿ ಗೋವಿಂದರಾಜ್, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಪಂಚಾಯತ್ ಸದಸ್ಯರು ಪುನೀತ್ ಮಾಡತ್ತಾರು, ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ನಾಯಕ್, ಉಪಾಧ್ಯಕ್ಷೆ ಚಂದ್ರಾವತಿ ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯರುಗಳಾದ ಉಮೇಶ್ ಅರ್ಕಲ್ ತೋಟ, ರೋಹಿಣಿ, ಲೋಕೇಶ್ ಗೌಡ, ಭಾರತಿ, ಮಹಾಬಲೇಶ್ವರ ಭಟ್ಟ, ಪ್ರೇಮಲತಾ ಪಟ್ಲ ಹಾಗೂ ಶಕ್ತಿಕೇಂದ್ರದ ಬೂತ್ ಅಧ್ಯಕ್ಷರುಗಳಾದ ಹರೀಶ್ ಚಂದ್ರ ನಾಯಕ್, ವಿನೋದ್ ಕುಮಾರ್, ಜಗದೀಶ್ ನೂಜಿ, ಕಾರ್ಯದರ್ಶಿಗಳು, ಕಾರ್ಯಕರ್ತರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.