- Advertisement -
- Advertisement -


ಗ್ರೌಂಡ್ ಇನ್ ಚಾರ್ಜ್ ವಿದ್ಯಾರ್ಥಿ ಮೇಲೆ ಹಾಕಿ ಸ್ಟಿಕ್ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಸಂತೋಷ್ ಹತ್ತೂರ ಹಲ್ಲೆಗೊಳಗಾದ ಬಿಬಿಎ ವಿದ್ಯಾರ್ಥಿ.
ಯಲ್ಲಪ್ಪ ಚಲವಾದಿ ಎಂಬ ಗ್ರೌಂಡ್ ಇನ್ಚಾರ್ಜ್ ಸಂತೋಷ್ ತಲೆಗೆ ಹಾಕಿ ಸ್ಟಿಕ್ ನಿಂದ ಹೊಡೆದಿದ್ದಾರೆ. ವಿದ್ಯಾರ್ಥಿ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, 9 ಸ್ಟಿಚ್ ಹಾಕಲಾಗಿದೆ. ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -