- Advertisement -
- Advertisement -
42 ಕ್ಷೇತ್ರಗಳ ಲಿಸ್ಟ್ ಬಿಡುಗಡೆ ಮಾಡಿದ ಹಸ್ತ ಪಡೆ
ಎರಡನೇ ಪಟ್ಟಿಯಲ್ಲಿ ಯಾರಿಗೆಲ್ಲಾ ಸ್ಥಾನ..?
ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್
ಇಂದು ನವದೆಹಲಿಯ ರಾಜಮಾರ್ಗದಲ್ಲಿರುವ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದ ಮುಖಂಡರಾದ ಸಿದ್ದರಾಮಯ್ಯ, ಜಿ. ಪರಮೇಶ್ವರ, ಹರಿಪ್ರಸಾದ್ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿ ಉಪಾಹಾರ ಸೇವಿಸಿ ನಂತರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಸಭೆಗಳ ಮೇಲೆ ಸಭೆಯನ್ನು ನಡೆಸಿದ್ದ ಕಾಂಗ್ರೆಸ್ ಮುಖಂಡರು ಕೊನೆಗೂ 42 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದಾರೆ. ಆದರೆ, ಇನ್ನೂ 58 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಗೊಂದಲವನ್ನು ಬಗೆಹರಿಸಲಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
- ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
- ಗೋಕಾಕ್- ಮಹಾಂತೇಶ್ ಕಡಾಡಿ
- ಕಿತ್ತೂರು- ಬಾಬಾ ಸಾಹೇಬ್ ಡಿ ಪಾಟೀಲ್
- ಸವದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ್ ವೈದ್ಯ
- ಮುದೋಳ್- ಆರ್ ಬಿ ತಿಮ್ಮಾಪುರ
- ಬಾದಾಮಿ-ಭೀಮಸೇನ್ ಬಿ ಚಿಮ್ಮನಕಟ್ಟಿ
- ಬೀಳಗಿ- ಜಿ.ಟಿ ಪಾಟೀಲ್
- ದೇವರಹಿಪ್ಪರಗಿ- ಎಸ್.ಆರ್. ಪಾಟೀಲ್
- ಬಾಗಲಕೋಟೆ- ಹುಲ್ಲಪ್ಪ ವೈ ಮೇಟಿ (HY ಮೇಟಿ)
- ಬಸವಕಲ್ಯಾಣ- ವಿಜಯ್ ಧರ್ಮಸಿಂಗ್
- ಕಲಘಟಗಿ- ಸಂತೋಷ್ ಲಾಡ್
- ಅಫಜಲ್ಪುರ್- ಎಂವೈ ಪಾಟೀಲ್
- ಮಡಿಕೇರಿ- ಡಾ. ಮಂತರಗೌಡ
- ಚಾಮುಂಡೇಶ್ವರಿ- ಸಿದ್ದೇಗೌಡ
- ಮಂಡ್ಯ- ಪಿ.ರವಿಕುಮಾರ್
- ಬೇಲೂರು- ಬಿ. ಶಿವರಾಂ
- ಗುಬ್ಬಿ- ಎಸ್.ಆರ್.ಶ್ರೀನಿವಾಸ್
- ಚಿತ್ರದುರ್ಗ- ವೀರೇಂದ್ರ ಪಪ್ಪಿ
- ಮೊಣಕಾಲ್ಕೂರು- ಎನ್. ವೈ ಗೋಪಾಲಕೃಷ್ಣ
- ಮಹಾಲಕ್ಷ್ಮಿ ಲೇಔಟ್- ಕೇಶವ್ ಮೂರ್ತಿ
- ಯಶವಂತಪುರ- ಎಸ್. ಬಾಲರಾಜಗೌಡ
- ಯಲಹಂಕ- ಕೇಶವ್ ರಾಜಣ್ಣ
- ಧಾರವಾಡ- ವಿನಯ್ ಕುಲಕರ್ಣಿ
- ತುಮಕೂರು ಸಿಟಿ- ಇನ್ಸಾಲ್ ಅಹಮದ್
- ಕಡೂರು- ಆನಂದ್ ಕೆ ಎಸ್
- ಉಡುಪಿ- ಪ್ರಸಾದ್ ರಾಜ್ ಕಾಂಚನ್
- ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್
- ಪದ್ಮನಾಭನಗರ- ರಘುನಾಥ್ ನಾಯ್ಡು
- ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ (ಸರ್ವೋದಯ ಕರ್ನಾಟಕ ಪಾರ್ಟಿ)
- ಮಂಡ್ಯ- ಪಿ.ರವಿಕುಮಾರ್
- ಬಿಜಾಪುರ ನಗರ (ವಿಜಯಪುರ) ಅಬ್ದುಲ್ ಅಹ್ಮದ್ ಖಾಜಾ ಸಾಹೇಬ್ ಮುಪ್ರಿಫ್
- ನಾಗಠಾಣ- ವಿಠಲ್ ಕಟಕದೊಂಡ
- ಯಾದಗಿರಿ- ಚೆನ್ನರೆಡ್ಡಿ
- ಕೃಷ್ಣರಾಜಪೇಟೆ- ಬಿ.ಎಲ್ ದೇವರಾಜ್
- ಕೊಳ್ಳೆಗಾಲ SC- ಎ.ಆರ್ ಕೃಷ್ಣ ಮೂರ್ತಿ
- ಗುರಮಿತ್ಕಲ್- ಬಾಬರಾಮ್ ಚಿಂಚನಸೂರ್
- ಗುಲ್ಬರ್ಗ ದಕ್ಷಿಣ-ಅಲ್ಲಮಪ್ರಭು ಪಾಟೀಲ್
- ಗಂಗಾವತಿ- ಇಕ್ವಾಲ್ ಅನ್ಸಾರಿ
- ನರಗುಂದಾ- ಬಿ. ಆರ್ ಯವಗಲ್
- ಶಿರಸಿ-ಭೀಮಣ್ಣ ನಾಯ್
- ಯಲ್ಲಾಪುರ- ವಿ ಎಸ್ ಪಾಟೀಲ್
- ಕುಡ್ಲಿಗಿ- ಸಂತೋಷಗಗ ಎಸ್ ಲಾಡ್
- Advertisement -