Saturday, May 4, 2024
spot_imgspot_img
spot_imgspot_img

ವೀಳ್ಯದೆಲೆ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..? ಇಲ್ಲಿದೆ ಮಾಹಿತಿ

- Advertisement -G L Acharya panikkar
- Advertisement -

ವೀಳ್ಯದೆಲೆಯನ್ನು ಅನೇಕ ಅರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಬಹುದು. ಅದು ಹೇಗೆ ಎನ್ನುವ ಬಗ್ಗೆ ಆಯುರ್ವೇದ ವೈದ್ಯೆ ಡಾ. ಪಲ್ಲವಿ ನೀಡಿದ ಮಾಹಿತಿ ಇಲ್ಲಿದೆ ನೋಡಿ.

ನಮ್ಮ ಸುತ್ತಲು ಅದೆಷ್ಟೊ ಸಸ್ಯಗಳು ಲೆಕ್ಕಿಸದಷ್ಟು ಆರೋಗ್ಯ ಗುಣಗಳನ್ನು ಅಡಕವಾಗಿರಿಸಿಕೊಂಡಿರುತ್ತವೆ. ಅದರೆಡೆಗೆ ಕೊಂಚ ಗಮನಹರಿಸಿದರೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಭಾರತೀಯರಲ್ಲಿ ಹಲವು ಆಚರಣೆ, ಪದ್ಧತಿಗಳು ಆರೋಗ್ಯಕ್ಕೆ ಅನುಕೂಲಕರವಾದ ಅನೇಕ ಗುಣಗಳನ್ನು ಹೊಂದಿದೆ. ಉದಾಹರಣೆಗೆ ಸಾಮಾನ್ಯವಾಗಿ ಊಟವಾದ ಬಳಿಕ ವೀಳ್ಯದೆಲೆ ಹಾಗೂ ಅಡಿಕೆಯನ್ನು ಸೇವನೆ ಮಾಡುತ್ತಾರೆ. ಇದಕ್ಕೆ ಕಾರಣವೆಂದರೆ ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ಆಗಲಿ ಎಂದು. ವೀಳ್ಯದೆಲೆ ಸಾಕಷ್ಟು ಆರೋಗ್ಯ ಗುಣಗಳ ಆಗರವಾಗಿದೆ.

ವೀಳ್ಯದೆಲೆಯ ಬಳಕೆಯನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಅಲ್ಲದೆ ಸುಲಭವಾಗಿ ಮನೆಯಲ್ಲಿಯೇ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಹಾಗಾದರೆ ವೀಳ್ಯದೆಲೆ ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಉಪಯುಕ್ತ, ಹೇಗೆಲ್ಲಾ ಬಳಸಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

​ಜೀರ್ಣಕ್ರಿಯೆಗೆ ಹೆಚ್ಚು ಉಪಯುಕ್ತ

ಆಯುರ್ವೇದ ಪದ್ಧತಿಯಲ್ಲಿ ಅಥವಾ ಸಂಸ್ಕೃತದಲ್ಲಿ ವೀಳ್ಯದೆಲೆಯನ್ನು ನಾಗವಲ್ಲಿ ಎಂದು ಕರೆಯುತ್ತಾರೆ. ಇದು ಜೀರ್ಣಕ್ರಿಯೆಗೆ ಹೆಚ್ಚು ಉಪಯುಕ್ತವಾಗಿದೆ. ಇದೇ ಕಾರಣಕ್ಕೆ ಊಟದ ಬಳಿಕ ತಾಂಬೂಲವನ್ನು ನೀಡುವುದು.

ವೀಳ್ಯದೆಲೆ ಕಾರ್ಮಿನೇಟಿವ್, ಗ್ಯಾಸ್ಟ್ರೋ-ರಕ್ಷಣಾತ್ಮಕ ಮತ್ತು ವಾಯು ವಿರೋಧಿ ಗುಣಗಳನ್ನು ಹೊಂದಿದೆ, ಇವೆಲ್ಲವೂ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತವೆ. ಅಲ್ಲದೆ ಲಾಲಾರಸದ ಉತ್ಪತ್ತಿಯನ್ನು ಕೂಡ ವೀಳ್ಯದೆಲೆ ಹೆಚ್ಚಿಸುತ್ತದೆ. ಹೀಗಾಗಿಯೇ ವೀಳ್ಯೆದೆಲೆಯ ಬಳಕೆಯನ್ನು ಮಾಡಬೇಕು ಎಂದು ಹೇಳುವುದು.

​ಮಕ್ಕಳಲ್ಲಿ ಕಂಡು ಬರುವ ಜ್ವರ, ಕೆಮ್ಮು, ಕಫಕ್ಕೆ ರಾಮಬಾಣ

ವೀಳ್ಯದೆಲೆ ಕಫದ ನಿವಾರಣೆಗೆ ಹೇಳಿ ಮಾಡಿಸಿದ ಮದ್ದಾಗಿದೆ. ಮಕ್ಕಳಲ್ಲಿ ಕಂಡುಬರುವ ಜ್ವರ, ಕೆಮ್ಮು, ಕಫಕ್ಕೆ ಔಷಧದ ಜೊತೆಗೆ ವೀಳ್ಯದೆಲೆಯ ರಸವನ್ನು ಆಯುರ್ವೇದದಲ್ಲಿ ನೀಡಲಾಗುತ್ತದೆ.

ಏಕೆಂದರೆ ಜ್ವರದ ಸಂದರ್ಭದಲ್ಲಿ ಹಸಿವೆ ಕಡಿಮೆ ಹೀಗಾಗಿ ವೀಳ್ಯದೆಲೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಹಸಿವೆಯಾಗುವಂತೆ ಮಾಡುತ್ತದೆ. ಜೊತೆಗೆ ಜ್ವರ ಕೂಡ ಒಂದೇ ದಿನದಲ್ಲಿ ಕಡಿಮೆಯಾಗುತ್ತದೆ. ವಾಂತಿಯ ಮೂಲಕ ಕಫವನ್ನೂ ದೇಹದಿಂದ ಹೊರಹಾಕುತ್ತದೆ.

​ಮಗುವಿನ ಗ್ಯಾಸ್ಟ್ರಿಕ್‌ ಸಮಸ್ಯೆಗೂ ಪರಿಹಾರ

ಸಾಮಾನ್ಯವಾಗಿ ಒಂದೆ ಅಥವಾ ಎರಡು ತಿಂಗಳ ಮಗುವಿನಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬೆಸ್ಟ್‌ ಪರಿಹಾರ ಎಂದರೆ ವೀಳ್ಯದೆಲೆ. ಹೌದು, ವೀಳ್ಯದೆಲೆಯನ್ನು ಬಿಸಿ ಮಾಡಿ ಹೊಕ್ಕಳಮೇಲೆ ಇಟ್ಟರೆ ಶಿಶುಗಳಲ್ಲಿ ಗ್ಯಾಸ್ಟ್ರಿಕ್‌, ಹೊಟ್ಟೆ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.

ಇದರಿಂದ ತಕ್ಷಣ ಆರಾಮದಾಯಕ ಅನುಭವವಾಗುತ್ತದೆ. ಚೆನ್ನಾಗಿ ನಿದ್ದೆಯನ್ನೂ ಕೂಡ ಮಕ್ಕಳು ಮಾಡುತ್ತಾರೆ. ಹೀಗಾಗಿ ವೀಳ್ಯದೆಲೆ ಎಲ್ಲಾ ವಯೋಮಾನದವರಿಗೂ ಉಪಯುಕ್ತವಾಗಿದೆ.

​ನಾಲಿಗೆಯ ಸ್ವಚ್ಛತೆಗೆ

ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿಅಥವಾ ದೊಡ್ಡವರಲ್ಲಿ ಹಾಲು ಇನ್ನಿತರ ದಪ್ಪವಾಗಿರುವ ಆಹಾರ ಸೇವನೆ ಮಾಡಿದಾಗ ನಾಲಿಗೆಯಲ್ಲಿ ಅಗ್ರ ಅಥವಾ ದಪ್ಪನೆಯ ದ್ರವ ಶೇಖರಣೆಯಾಗುತ್ತದೆ. ಇದರಿಂದ ಆಹಾರ ರುಚಿಸುವುದಿಲ್ಲ. ಇದಕ್ಕೆ ವೀಳ್ಯದೆಲೆ ಉತ್ತಮ ಮದ್ದಾಗಿದೆ.

ವೀಳ್ಯದೆಲೆಯ ರಸವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡಿದರೆ ನಾಲಿಗೆ ಶುಚಿಯಾಗಿ ಆಹಾರವೂ ರುಚಿಸುತ್ತದೆ. ಆದರೆ ನೆನಪಿಡಿ ವೀಳ್ಯದೆಲೆ ಉಷ್ಣಸ್ವಭಾವವನ್ನು ಹೊಂದಿದೆ. ಹೀಗಾಗಿ ಜಾಸ್ತಿ ಸೇವನೆ ಬೇಡ.

​ಮಲಬದ್ಧತೆಗೆ ಪರಿಹಾರ

ಚಿಕ್ಕಮಕ್ಕಳಲ್ಲಿ ಕೆಲವೊಮ್ಮೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೂ ಕೂಡ ವೀಳ್ಯದೆಲೆ ಬೆಸ್ಟ್‌ ಮದ್ದಾಗಿದೆ. ವೀಳ್ಯದೆಲೆಯ ತೊಟ್ಟನ್ನು ಹರಳೆಣ್ಣೆಯಲ್ಲಿ ನೆನೆಸಿ ಗುದದ್ವಾರದ ಬಳಿ ಇಟ್ಟರೆ ಮಲವಿಸರ್ಜನೆ ಕೂಡ ಸರಾಗವಾಗಿ ಆಗುತ್ತದೆ.

ಹೀಗಾಗಿ ದೈನಂದಿನ ಜೀವನದಲ್ಲಿ ವೀಳ್ಯದೆಲೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಜೀರ್ಣತೆಯ ನಿವಾರಣೆಯಿಂದ ಹಿಡಿದು ಜ್ವರದಂತಹ ಕಾಯಿಲೆಗಳಿಗೂ ವೀಳ್ಯದೆಲೆಯನ್ನು ಬಳಸುವುದು ಉಪಯುಕ್ತ.

- Advertisement -

Related news

error: Content is protected !!