- Advertisement -
- Advertisement -
ಕೇರಳ: ಶಬರಿಮಲೆಗೆ ತೆರಳಿದ್ದ ಮಿನಿ ಬಸ್ಗೆ ಲಾರಿ ಡಿಕ್ಕಿ ಹೊಡೆದ ಘಟನೆ ಕೇರಳದ ಕಣ್ಣೂರು ಬಳಿಯ ಪೊನ್ನೂರು ಬಳಿ ನಡೆದಿದೆ. ಇಲ್ಲಿನ ಪೇಟೆ ಕುರುಬರಹಳ್ಳಿ ನಿವಾಸಿಗಳು ಶಬರಿಮಲೆಗೆ ಮಿನಿ ಬಸ್ನಲ್ಲಿ ತೆರಳಿ ವಾಪಸ್ ಆಗುವಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 23 ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶಬರಿಮಲೆ ದರ್ಶನಕ್ಕೆಂದು ಮಾಲೆ ಧರಿಸಿ ನವೆಂಬರ್ 20 ರ ರಾತ್ರಿ ದರ್ಶನಕ್ಕೆಂದು ತೆರಳಿದ್ದರು. ಶಬರಿಮಲೆ ದರ್ಶನ ಮುಗಿಸಿಕೊಂಡು ಧರ್ಮಸ್ಥಳಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ. ಪೊನ್ನೂರು ಬಳಿ ತಿರುವು ತೆಗೆದುಕೊಂಡು ಹೋಗುವಾಗ ಎದುರಿಗೆ ಬಂದ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಬಸ್ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊನ್ನೂರು ಪೊಲೀಸರು ಭೇಟಿ ನೀಡಿದ್ದಾರೆ.
- Advertisement -