- Advertisement -
- Advertisement -

ಬೆಂಗಳೂರು: ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರವನ್ನು ಘೋಷಿಸಿದೆ.

ಈ ಕುರಿತು ಸಚಿವ ಈಶ್ವರಪ್ಪ ಮಾಹಿತಿ ನೀಡಿದ್ದು, ಫೆ.20ರಂದು ಶಿವಮೊಗ್ಗ ನಗರದಲ್ಲಿ ಹತ್ಯೆಗೀಡಾದಂತ ಹರ್ಷ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಮಾರ್ಚ್ 6ರಂದು ಹರ್ಷ ಮನೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಾನು ಹೋಗಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಇನ್ನು ಹರ್ಷ ಹತ್ಯೆಯ ನಡೆದ ಬಳಿಕ ಇಡೀ ಶಿವಮೊಗ್ಗ ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಶಾಲಾ-ಕಾಲೇಜು ಬಂದ್ ಕೂಡ ಮಾಡಲಾಗಿದ್ದು, ಇದೀಗ ನಗರ ಸಹಜ ಸ್ಥಿತಿಗೆ ತಲುಪಿದೆ.


- Advertisement -