ಕಡಬ: ಶ್ರೀಗಂಧ ಹಾಗೂ ವಾಹನ ಕಳವು ಮಾಡಿದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. 39 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅರಣ್ಯ ಕಾಯ್ದೆ ಹಾಗೂ ಕಳ್ಳತನ ಪ್ರಕರಣದ ಅನ್ವಯ ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕಾಡೂರು ಕೊಡಿಗೆ ಗ್ರಾಮದ ಅಬೂಬಕ್ಕರ್ (63) ಬಂಧಿತ ಆರೋಪಿ. 1984 ರಲ್ಲಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಆರೋಪಿ ಪತ್ತೆಯಾಗದ ಈ ಹಿನ್ನಲೆಯಲ್ಲಿ ನ್ಯಾಯಾಲಯವು ದೀರ್ಘ ಕಾಲದಿಂದ ಬಾಕಿ ಇರುವ ಪ್ರಕರಣ ಎಂದು ಪರಿಗಣಿಸಿದೆ. ಆ ನಂತರ ಕಡಬ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಶೋಧ ಕಾರ್ಯಾಚರಣೆ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
ನ್ಯಾಯಾಲಯವು ಈ ಪ್ರಕರಣದ ಮರು ವಿಚಾರಣೆ ನಡೆಸಲಿದ್ದು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುವುದೆಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಆರೋಪಿಯನ್ನು ಮೂಡಿಗೆರೆ ತಾಲೂಕು ಬಾಳೂರು ಎಂಬಲ್ಲಿ ಪತ್ತೆ ಹಚ್ಚಿ ವಿಚಾರಣೆ ಮಾಡಲಾಗಿದೆ ಈ ಕಾರ್ಯಾಚರಣೆಯಲ್ಲಿ ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಜು ನಾಯಕ್, ಭವಿತ್ ರಾಜ್ ಸಿಬ್ಬಂದಿ ಸಿರಾಜುದ್ದೀನ್ ಭಾಗಿಯಾಗಿದ್ದರು. ಆರೋಪಿಯ ವಿರುದ್ಧ ರಾಣೀಬೆನ್ನೂರು ಹಾಗೂ ಮೈಸೂರು ವಿವಿ ಪುರಂ ಠಾಣೆಗಳಲ್ಲಿ ಇನ್ನೆರಡು ಪ್ರಕರಣಗಳಿದ್ದೂ ವಾರೆಂಟ್ ಜಾರಿಯಾಗಿದೆ.!!