Friday, April 26, 2024
spot_imgspot_img
spot_imgspot_img

ಶ್ರೀ ರಾಮ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ನಡೆದ ” ರಜನೀಶ್” ಮೆಮೊರೆಬಲ್ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ” ವತಿಯಿಂದ ಸಹಾಯಧನ ವಿತರಣೆ

- Advertisement -G L Acharya panikkar
- Advertisement -

ಶ್ರೀ ರಾಮ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ನಡೆದ “ರಜನೀಶ್” ಸ್ಮರಣಾರ್ಥವಾಗಿ ನಡೆಸಿದ ಕ್ರಿಕೆಟ್ ಪಂದ್ಯಾಟವು ರಜನೀಶ್ ರವರ ಪುಟ್ಟ ಮಗಳ ಮುಂದಿನ ವಿದ್ಯಾಭ್ಯಾಸಕ್ಕೆ ಏನಾದರು ಕೊಡಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಆಯೋಜಿಸಿದ್ದ ” ರಜನೀಶ್” ಮೆಮೊರೆಬಲ್ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ” ದಾನಿಗಳ ಸಹಕಾರದಿಂದ ಬಹಳ ಯಶಸ್ವಿಯಾಗಿ ನಡೆಯಿತು.

ಅದರಂತೆ ಪಂದ್ಯಾಟದಲ್ಲಿ ಉಳಿಕೆಯಾದ ಮೊತ್ತದಲ್ಲಿ ₹ 75,000ವನ್ನು ಆ ಮಗುವಿನ ಹೆಸರಿನಲ್ಲಿ ಸ್ಥಿರ ಠೇವಣಿ ಖಾತೆಯಲ್ಲಿ ಹಾಕಿದ್ದು ಅದಲ್ಲದೆ ಪಂದ್ಯಾಟದ ಕೊನೆಗೆ ತಂಡಗಳು ನೀಡಿದ ₹ 20,000 ನಗದನ್ನು ಆ ಮಗುವಿನ ಕೈಗೆ ನೇರವಾಗಿ ನೀಡಲಾಗಿದೆ. ಜೊತೆಗೆ ರೂ. 10,000 ವನ್ನು ವೀರಕಂಭದಲ್ಲಿ ನಡೆದ ಅಪಘಾತದಲ್ಲಿ ಮರಣ ಹೊಂದಿದ ಮಾಣಿಲ ನಿವಾಸಿ ಮನೋಜ್ ಕುಟುಂಬಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರಿನ ಕಾಂಗ್ರೆಸ್ ನಾಯಕಿ ದಿವ್ಯ ಪ್ರಭಾ ಗೌಡ ಚಿಲ್ತಡ್ಕ, ಶ್ರೀರಾಮ್ ಶ್ರೀರಾಮ್ ಫ್ರೆಂಡ್ಸ್ ನ ಅಧ್ಯಕ್ಷರಾದ ರವಿಕುಮಾರ್ ಕಟ್ಟೆ, ಹಾಗೂ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!