Thursday, April 18, 2024
spot_imgspot_img
spot_imgspot_img

ಸಮಸ್ತ ಕೇರಳ ಜಂ ಇಯತುಲ್ ಮುಅಲ್ಲಿಮೀನ್ ಮಿತ್ತಬೈಲ್ ರೇಂಜ್ ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಪುನರಾಯ್ಕೆ

- Advertisement -G L Acharya panikkar
- Advertisement -

ವಿಟ್ಲ: ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲಿಮೀನ್ ಮಿತ್ತಬೈಲ್ ರೇಂಜ್ ಇದರ ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಪುನರಾಯ್ಕೆಗೊಂಡರು.

ಮಿತ್ತಬೈಲ್ ದಾರುಲ್ ಮಅರಿಫ್ ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರೇಂಜ್ ನ ವಾರ್ಷಿಕ  ಮಹಾ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಸ್ ಎಂ.ಎಚ್. ಕಾಸಿಂ ಮುಸ್ಲಿಯಾರ್ ಮಹಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಇಮಾಂ ಫಕ್ರುದ್ದೀನ್ ಫೈಝಿ ಉದ್ಘಾಟಿಸಿದರು. ಕಾಸಿಂ ಮುಸ್ಲಿಯಾರ್ ದುವಾ ನೆರವೇರಿಸಿದರು. ಮುದರ್ರಿಬ್ ರಿಯಾಝ್ ರಹ್ಮಾನಿ, ಮಿತ್ತಬೈಲ್ ಮುಹ್ಯುದ್ದೀನ್ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ, ಮಿತ್ತಬೈಲ್ ದಾರುಲ್ ಮಅರಿಫ್ ಮದ್ರಸ ಅಧ್ಯಕ್ಷರಾದ ಅಬ್ದುಲ್ ಕಾದರ್ ಹಾಜಿ, ಮಿತ್ತಬೈಲ್ ರೆಂಜ್ ಮೇನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ನಂದರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾಗಿ ಇಬ್ರಾಹಿಂ ದಾರಿಮಿ, ಬಶೀರ್ ಅಝ್ಹರಿ, ಪ್ರದಾನ ಕಾರ್ಯದರ್ಶಿಯಾಗಿ ಮುಸ್ತಪ ಪೈಝಿ, ಕಾರ್ಯದರ್ಶಿಗಳಾಗಿ ಫಕ್ರುದ್ದೀನ್ ದಾರಿಮಿ, ಅನ್ವರ್ ಅಝ್ಹರಿ, ಕೋಶಾಧಿಕಾರಿಯಾಗಿ ಯೂಸುಫ್ ಬದ್ರಿಯಾ, ಪರೀಕ್ಷಾ ಬೋರ್ಡು ಚೇರ್ಮೆನ್ ಆಗಿ ಅಬ್ದುಲ್ ಮಜೀದ್ ಮದನಿ, ಐ.ಟಿ. ಕೊಡಿನೇಟರ್ ಆಗಿ ರಫೀಕ್ ಅಸ್ಲಮಿ, ಎಸ್ಕೆಎಸ್ಬಿವಿ ಕನ್ವಿನರ್ ಆಗಿ ರಶೀದ್ ಯಮಾನಿ ಅವರು ಆಯ್ಕೆಯಾದರು. ಮುಸ್ತಪ ಪೈಝಿ ಸ್ವಾಗತಿಸಿ, ವಂದಿಸಿದರು.

- Advertisement -

Related news

error: Content is protected !!