Thursday, May 16, 2024
spot_imgspot_img
spot_imgspot_img

ಸರ್ಕಾರಿ ಬಸ್‌-ಲಾರಿ ನಡುವೆ ಭೀಕರ ಅಪಘಾತ; ಇಬ್ಬರು ಸಾವು

- Advertisement -G L Acharya panikkar
- Advertisement -

ವಿಜಯಪುರ: ಸರ್ಕಾರಿ ಬಸ್‌ ‌ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾ ನಗರದ ಬಳಿ ನಡೆದಿದೆ.

ವಿಜಯಪುರ ನಿವಾಸಿ ಶಿವಾನಂದ ಬಡಿಗೇರ (18) ಮತ್ತು ತಮಿಳುನಾಡು ಮೂಲಕ ಲಾರಿ ಚಾಲಕ ಬಾಬು ವೆಂಕಟೇಶ್‌ ಮೃತ ದುರ್ದೈವಿಗಳು. 24 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಿಕೋಟಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!