ಬೆಂಗಳೂರು: ನಗರದ ಬಾಣಸವಾಡಿಯಲ್ಲಿ ನೈಜೀರಿಯನ್ ಪ್ರಜೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ
10 ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ನೈಜೀರಿಯಾ ಮೂಲದ ಮೃತ ವಿಕ್ಟರ್ ಇತ್ತೀಚಿಗೆ ಬೆಂಗಳೂರಿನ ಹುಡುಗಿಯೊಬ್ಬರನ್ನ ವಿವಾಹವಾಗಿದ್ದ. ನಿನ್ನೆ ಕಮ್ಮನಹಳ್ಳಿ ಬಳಿ ನಡೆದು ಬರ್ತಿದ್ದ ವೇಳೆ ಆತನ ಮೇಲೆ ಅಟ್ಯಾಕ್ ಮಾಡಿದ್ದ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ವಿಕ್ಟರ್ಗೆ ಇರಿದು ನಾಪತ್ತೆಯಾಗಿದ್ದರು. ಸದ್ಯ ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯ ಕಾರಣ ಕೇಳಿ ಶಾಕ್ ಆದ ಖಾಕಿ ಪಡೆ.
ಇನ್ನು ಘಟನೆಯ ಕುರಿತು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಮಾಹಿತಿ ನೀಡಿದ್ದು ಆರೋಪಿಗಳನ್ನು ವಿಚಾರಣೆ ನಡೆಸುವಾಗ ದುಷ್ಕರ್ಮಿಗಳು ತಾವು ಸಿಗರೇಟ್ ಕಾರಣಕ್ಕಾಗಿ ಕೊಲೆ ಮಾಡಿದ್ದೇವೆ ಎಂದಿದ್ದಾರೆ. ಬೀಯರ್ ಹಾಗೂ ಸಿಗರೇಟ್ ವಿಚಾರಕ್ಕೆ ಗಲಾಟೆ ನಡೆದಿದ್ದು ಈ ವೇಳೆ ಬೀಯರ್ ಬಾಟಲ್ ನಿಂದ ಚುಚ್ಚಿ ಕೊಲೆಗೈದಿರೋದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ ಎಂದು ಮಾಹಿತಿ ನೀಡಿದರು.