Sunday, April 28, 2024
spot_imgspot_img
spot_imgspot_img

ಸುಬ್ರಹ್ಮಣ್ಯ: ದಡಕ್ಕೆ ಬಂದ ಮೊಸಳೆ; ಮೊಬೈಲ್‌ನಲ್ಲಿ ಸೆರೆಯಾದ ದೃಶ್ಯ.!

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಯೇನೆಕಲ್ಲು ಗ್ರಾಮದ ಶ್ರೀ ಶಂಕಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಳದ ಬಳಿಯ ಬಚ್ಚನಾಯಕನ ದೈವಸ್ಥಾನದ ಬಳಿ ಮೊಸಳೆಯೊಂದು ದಡಕ್ಕೆ ಬಂದಿದ್ದು, ಬಳಿಕ ಮತ್ತೆ ನದಿಗೆ ತೆರಳಿದೆ.

ಸೋಮವಾರ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ನದಿ ತುಂಬಿ ಹರಿದಿದ್ದು, ಹೀಗಾಗಿ ಮೊಸಳೆ ದಡಕ್ಕೆ ಬಂದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಮೊಸಳೆ ದಡಕ್ಕೆ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಆಸುಪಾಸಿನವರು ನದಿ ಬಳಿ ಬಂದು ಮೊಸಳೆಯನ್ನು ನೋಡುತ್ತಿದ್ದರು. ಜನ ಸೇರುತ್ತಿದ್ದುದನ್ನು ಕಂಡು ಮೊಸಳೆ ಸೀದಾ ನದಿ ಕಡೆಗೆ ತೆರಳಿದೆ. ಈ ದೃಶ್ಯವನ್ನು ಸ್ಥಳೀಯರಾದ ಮನುದೇವ ಪರಮಲೆ ಅವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

- Advertisement -

Related news

error: Content is protected !!