Saturday, June 28, 2025
spot_imgspot_img
spot_imgspot_img

ಸುರತ್ಕಲ್‌ ಟೋಲ್‌ ಗೇಟ್ ತೆರವು ಒತ್ತಾಯಿಸಿ ಪ್ರತಿಭಟನೆ ; ಬೈಕ್‌ ರ್‍ಯಾಲಿಗೆ ತಡೆ – ಪ್ರತಿಭಟನಾಕಾರರ ಬಂಧನ

- Advertisement -
- Advertisement -

ಸುರತ್ಕಲ್‌ ಟೋಲ್‌ ಗೇಟ್ ತೆರವಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಯುತ್ತಿದೆ. ಈ ಧರಣಿ ಬೆಂಬಲಿಸಿ ಉರ್ವಸ್ಟೋರ್ ಜಂಕ್ಷನ್‌ನಿಂದ ಪ್ರತಿಭಟನಾ ಸ್ಥಳದವರೆಗೆ ಡಿವೈಎಫ್ಐ ಹಾಗೂ ಎಸ್ಎಫ್ಐ ವತಿಯಿಂದ ನಡೆಸಲು ಉದ್ದೇಶಿಸಿದ್ದ ಬೈಕ್ ರ‍್ಯಾಲಿಗೆ ಪೊಲೀಸರು ತಡೆ ಒಡ್ಡಿದ್ದಾರೆ.

ಈ ಬೈಕ್ ರ‍್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದರು. ಈ ವೇಳೆ ಡಿವೈಎಫ್ಐ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. 50ಕ್ಕೂ ಅಧಿಕ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳಿಕ ಪಾದಯಾತ್ರೆ ಮೂಲಕವೇ ಪಾದಯಾತ್ರೆಯ ಮೂಲಕವೇ ಸುರತ್ಕಲ್‌ಗೆ ತೆರಳಲು ಪ್ರತಿಭಟನಾಕಾರರು ಮುಂದಾದರು. ಪ್ರತಿಭಟನಾಕಾರರನ್ನು ಉರ್ವ ಠಾಣಾ ಪೊಲೀಸರು ತಡೆದು ಬಂಧಿಸಿದರು. ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ನವೀನ್ ಕೊಂಚಾಡಿ ಸಹಿತ ಸುಮಾರು 25ಕ್ಕೂ ಅಧಿಕ ಕಾರ್ಯಕರ್ತರನ್ನು ಉರ್ವ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

- Advertisement -

Related news

error: Content is protected !!