- Advertisement -
- Advertisement -
ಸುಳ್ಯ: ಗಾಂಧಿ ನಗರದ ಗುರುಂಪು ಎಂಬಲ್ಲಿ ನಿರ್ಮಾಣ ಕಾಮಗಾರಿ ವೇಳೆ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮನೆ ಮಾಲಕ ಸೇರಿ ಮೂವರ ವಿರುದ್ಧಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುಂಪು ನಿವಾಸಿ ಅಬೂಬಕ್ಕರ್ ಅವರ ಮನೆಯ ಹಿಂಭಾಗದ ಬರೆಗೆ ತಡೆಗೋಡೆ ನಿರ್ಮಿಸಲು ಕಾಮಗಾರಿ ನಡೆಸುತ್ತಿದ್ದಾಗ ಭೂಕುಸಿತ ಸಂಭವಿಸಿ ಕಾರ್ಮಿಕರಾದ ಸೋಮಶೇಖರ್ ರೆಡ್ಡಿ(45) ಮತ್ತು ಅವರ ಪತ್ನಿ ಶಾಂತಾ (35) ಚಂದ್ರಪ್ಪ (50) ಮೃತ ಪಟ್ಟಿದ್ದರು.
ಘಟನೆಯ ಕುರಿತಂತೆ ಸಾವಿಗೀಡಾದ ಸೋಮಶೇಖರ್ ರೆಡ್ಡಿ ಸಹೋದರ ಮಾಲತೇಶ ರೆಡ್ಡಿ ಎಂಬವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿಯನ್ನು ನಡೆಸಿದ ಹಿನ್ನೆಲೆಯಲ್ಲಿ ಈ ದುರಂತ ನಡೆಯಲು ಕಾರಣವಾಯಿತು ಎಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ಮಾಲಕ ಅಬೂಬಕರ್, ಮೇಸ್ತ್ರಿ ನಾಗರಾಜ್ ಮತ್ತುಎಂಜಿನಿಯರ್ ವಿಜಯ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
- Advertisement -