- Advertisement -
- Advertisement -
ಸುಳ್ಯ: ಪಶ್ಚಿಮ ಘಟ್ಟಗಳಲ್ಲಿ ಕಳೆದ ಹಲವಾರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಗುಡ್ಡವೊಂದು ಕುಸಿದು ಆ ಮಣ್ಣು ರಸ್ತೆಯ ಮೇಲೆ ಬೀಳುತ್ತಿರುವ ಅಪಾಯಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಸಂಪಾಜೆ ಸಮೀಪದ ಮೈಸೂರು ಮಂಗಳೂರು 275 ರ ರಾಷ್ಟ್ರೀಯ ಹೆದ್ದಾರಿಯ ಗೂನಡ್ಕದಲ್ಲಿ ನಡೆದಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮೀಪವಿರುಂತಹ ಗುಡ್ಡ ಕುಸಿದು ರಸ್ತೆಯೇ ಸಂಪೂರ್ಣ ಬ್ಲಾಕ್ ಆಗುವಂತಹ ಆತಂಕ ವಾಹನ ಸವಾರರಿಗೆ, ಪಾದಾಚಾರಿಗಳಿಗೆ ಎದುರಾಗಿದೆ.
ಸದ್ಯ ಇಲ್ಲಿನ ಗುಡ್ಡ ಕುಸಿದು ರಾಶಿ-ರಾಶಿ ಮಣ್ಣು ರಸ್ತೆಯ ಮೇಲೆ ಬೀಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
- Advertisement -