Friday, May 3, 2024
spot_imgspot_img
spot_imgspot_img

ಸುಳ್ಯ: ಮಾತನಾಡುವ ಸಲುವಾಗಿ ಕರೆದ ಸ್ನೇಹಿತರು; ಮನೆಬಿಟ್ಟು ಹೋದ ಬಳಿಕ ಚಿನ್ನಾಭರಣ, ನಗದು ಕಳವು!

- Advertisement -G L Acharya panikkar
- Advertisement -

ಸುಳ್ಯ: ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಮನೆಯಿಂದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ ಘಟನೆ ಸುಳ್ಯ ತಾಲೂಕಿನ ಮರ್ಕಂಜದ ತೇರ್ಥಮಜಲು ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಬಂಟ್ವಾಳ: ಹೆಂಡತಿಯೊಂದಿಗೆ ಅನೈತಿಕ‌ ಸಂಬಂಧವಿದೆ ಎಂದು ಶಂಕಿಸಿ ತಮ್ಮನನ್ನು ಬರ್ಬರವಾಗಿ ಹತ್ಯೆಗೈದ ಅಣ್ಣ!

ತೇರ್ಥಮಜಲು ಬಳಿಯ ಸೂಟೆಗದ್ದೆ ದಾಮೋದರ ಪೂಜಾರಿ ಎಂಬವರ ಮನೆಯಲ್ಲಿ ತೋಟ ಲೀಸಿಗೆ ತೆಗೆದುಕೊಳ್ಳಲು ತಂದಿರಿಸಿದ್ದ 62,000 ಮತ್ತು ಪತ್ನಿ, ಮಕ್ಕಳ ಒಟ್ಟು 6 ಪವನ್ ಚಿನ್ನಾಭರಣ ಕಳವಾಗಿದೆ.

ದಾಮೋದರ ಅವರನ್ನು ಅವರ ಆಪ್ತರು ಜು.31ರಂದು ಸಂಜೆ ಸುಬ್ರಹ್ಮಣ್ಯಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬಳಿಕ ರಾತ್ರಿ ವೇಳೆಗೆ ಅವರು ಮನೆಗೆ ವಾಪಾಸು ಬಂದಿದ್ದರು ಈ ವೇಳೆಯಲ್ಲಿ ಅವರಿಗೆ ಮನೆಯೊಳಗೆ ಅಡುಗೆ ಕೋಣೆಯಲ್ಲಿ ಚೆಲ್ಲಾಡಿರುವುದು ಕಂಡು ಬಂದಿದ್ದು, ಅಲ್ಲದೇ ಅವರ ಪಕ್ಕದ ಕೋಣೆಯಲ್ಲಿಯೂ ವ್ಯತ್ಯಾಸ ಗಮನಿಸಿದಾಗ ಹಣ ಹಾಗೂ ಚಿನ್ನಾಭರಣ ಕಳವುಗೈದಿರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ: ಕೂದಲೆಳೆಯ ಅಂತರದಲ್ಲಿ ಭಾರತಕ್ಕೆ ಪದಕ ಮಿಸ್: ಗಾಲ್ಫ್ ನಲ್ಲಿ ಮಿಂಚು ಹರಿಸಿದ ಕರುನಾಡ ಅದಿತಿಗೆ 4ನೇ ಸ್ಥಾನ..!

ಕಳವುಗೈಯುವ ಉದ್ದೇಶದಿಂದ ದಾಮೋದರ ಅವರನ್ನು ಈ ಆಪ್ತರು ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿರಬೇಕೆಂದು ದಾಮೋದರರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ ದಾಮೋದರ ಅವರು ಸುಳ್ಯ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!