Friday, May 10, 2024
spot_imgspot_img
spot_imgspot_img

ಹಾಡಹಗಲೇ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ..!!

- Advertisement -G L Acharya panikkar
- Advertisement -
vtv vitla

ಭಟ್ಕಳ: ಆಸ್ತಿ ವಿಚಾರವಾಗಿ ಒಂದೇ ಕುಟುಂಬದ ನಾಲ್ವರನ್ನು ಹಾಡಹಗಲೇ ಬರ್ಬರವಾಗಿ ಕೊಲೆಗೈದ ಘಟನೆ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿನಡೆದಿದೆ.

ಹಾಡುವಳ್ಳಿ ನಿವಾಸಿ ಶಂಭು ಭಟ್ಟ (68), ಅವರ ಪತ್ನಿ ಮಾದೇವಿ ಭಟ್ಟ (54) ಅವರ ಪುತ್ರ ರಾಜೀವ ಭಟ್ಟ (34) ಹಾಗೂ ಸೊಸೆ ಕುಸುಮಾ (30) ಹತ್ಯೆಗೀಡಾದವರು.

ಮಧ್ಯಾಹ್ನ ಹಾಡುವಳ್ಳಿಯ ತಮ್ಮ ಮನೆಯ ಸಮೀಪವೇ ನಾಲ್ವರು ಕೊಲೆಯಾಗಿ ಬಿದ್ದಿದ್ದು ನಾಲ್ವರಿಗೂ ಕೂಡಾ ಮುಖ, ಕುತ್ತಿಗೆ ಹಾಗೂ ತಲೆಯ ಭಾಗದಲ್ಲಿ ಕತ್ತಿ ಅಥವಾ ತಲವಾರಿನಿಂದ ತೀವ್ರವಾಗಿ ಕಡಿದ ಗಾಯಗಳಾಗಿವೆ. ಮೂವರು ಹತ್ತಿರದಲ್ಲಿಯೇ ಬಿದ್ದುಕೊಂಡಿದ್ದರೆ ಶಂಭು ಭಟ್ಟರ ಶವ ಸ್ವಲ ದೂರದಲ್ಲಿ ಬಿದ್ದುಕೊಂಡಿದ್ದು ಕಂಡು ಬಂದಿದೆ. ಮೂವರನ್ನು ಹತ್ಯೆ ಮಾಡಿದನ್ನ ಕಂಡ ಇವರು ಓಡಿ ಹೋಗುವಾಗ ಕೊಲೆಗಾರ ಬೆನ್ನಟ್ಟಿ ಕೊಲೆ ಮಾಡಿದನೇ ಅಥವಾ ತೋಟದಲ್ಲಿ ಕೆಲಸ ಮಾಡುತ್ತಿರುವವರನ್ನು ಅಲ್ಲಿಯೇ ಕೊಚ್ಚಿ ಕೊಂದರೇ ಎನ್ನುವುದು ತಿಳಿದು ಬರಬೇಕಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಇದು ಆಸ್ತಿ ವಿವಾದದ ಹಿನ್ನಲೆಯಲ್ಲಿ ನಡೆದ ಕೊಲೆ ಎನ್ನಲಾಗುತ್ತಿದೆ. ಕೆಲವು ತಿಂಗಳ ಹಿಂದೆ ವಿದ್ಯಾಭಟ್‌ ಅವರ ಪತಿ ನಿಧನರಾಗಿದ್ದರು. ಶಂಭು ಭಟ್ಟರ ಮೂವರು ಹೆಣ್ಣು ಮತ್ತು ಇಬ್ಬರು ಗಂಡ ಮಕ್ಕಳಲ್ಲಿ ವಿದ್ಯಾಭಟ್‌ ಪತಿ ಹಿರಿಯರಾಗಿದ್ದರು. ಇವರ ಮರಣದ ನಂತರ ಶಂಭು ಅವರು ತಮ್ಮ ಆಸ್ತಿಯಲ್ಲಿ ಒಂದು ಎಕರೆ ತಾವು ಉಳಿಸಿಕೊಂಡು ಉಳಿದ ಮಕ್ಕಳಿಗೆ ತಲಾ 1.25 ಎಕರೆಯಂತೆ ಮಕ್ಕಳಿಗೆ ಹಂಚಿಕೆ ಮಾಡಿದ್ದರು.

ಆಸ್ತಿ ವಿಷಯವಾಗಿ ಮೃತಪಟ್ಟ ತನ್ನ ಗಂಡನ ಕುಟುಂಬದ ಜತೆ ವಿದ್ಯಾಭಟ್‌ ಜಗಳ ಮಾಡಿದ್ದರು. ಸೊಸೆಯ ಸಹೋದರ ಆಸ್ತಿಯ ವಿಷಯಕ್ಕೆ ಆಗಾಗ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಆತನ ಮೇಲೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಾಜೀವ ಭಟ್ಟರ ಇಬ್ಬರು ಮಕ್ಕಳಲ್ಲಿ ಓರ್ವ ಶಾಲೆಗೆ ಹೋಗಿದ್ದು ಇನ್ನೋರ್ವ ಮನೆಯಲ್ಲಿಯೇ ಇದ್ದರೂ ಕೂಡಾ ಆತನನ್ನು ಕೊಲೆ ಮಾಡದೇ ಬಿಟ್ಟು ಹೋಗಿದ್ದಾರೆ. ಇದರಿಂದ ಎರಡು ಕಂದಮ್ಮಗಳು ಕೊಲೆಗಾರರಿಂದ ಬಚಾವಾಗಿದ್ದರೆ.

- Advertisement -

Related news

error: Content is protected !!