Thursday, April 25, 2024
spot_imgspot_img
spot_imgspot_img

ಹಾಡುಹಗಲೇ ವಕೀಲೆ ಮೇಲೆ ಹಲ್ಲೆ; ಆರೋಪಿಯ ಬಂಧನ

- Advertisement -G L Acharya panikkar
- Advertisement -

ಬಾಗಲಕೋಟೆ: ಮಹಿಳಾ ನ್ಯಾಯವಾದಿ ಹಾಗೂ ಅವರ ಪತಿಗೆ ಸಾರ್ವಜನಿಕವಾಗಿ ಹಾಡುಹಗಲಿನಲ್ಲಿಯೇ ವ್ಯಕ್ತಿಯೊಬ್ಬ ಥಳಿಸಿದ ಘಟನೆ ವಿನಾಯಕ ಕ್ರಾಸ್‌ನಲ್ಲಿ ನಡೆದಿದೆ.

ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಎಂಬಾತನೇ ಕೃತ್ಯ ಎಸಗಿದಾತ. ಈತನನ್ನು ಪೊಲೀಸರು ಬಂಧಿಸಿದ್ದಾರೆ. ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆ ಪತಿ ಮೇಲೆ ಈತ ಥಳಿಸಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೊಳಗಾದ ನ್ಯಾಯವಾದಿ ಮತ್ತು ಆರೋಪಿ ಮಹಾಂತೇಶ್ ಗೆ ಆತನ ಗಿಫ್ಟ್ ಸೆಂಟರ್‌ನಲ್ಲಿ ಗಲಾಟೆ ನಡೆದಿತ್ತು. ಮೈದುನನೊಂದಿಗೆ ಬಂದ ಆಕೆ ಸೆಂಟರ್‌ನಲ್ಲಿ ಆತನೊಂದಿಗೆ ಗಲಾಟೆಗಿಳಿದು ಸಾಮಾನು ಎಳೆದಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರಿಂದ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಸಂಗೀತಾ ಹಾಗೂ ಅವರ ಪತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್‍ ತಿಳಿಸಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!