Tuesday, May 7, 2024
spot_imgspot_img
spot_imgspot_img

ಹೆತ್ತವರ ವಿರೋಧದಿಂದಾಗಿ ದುರಂತ ಅಂತ್ಯ ಕಂಡ ಪ್ರೇಮ ಪ್ರಕರಣ

- Advertisement -G L Acharya panikkar
- Advertisement -

ವಿಜಯಪುರ: ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿಗಳ ಪ್ರೇಮ ಪ್ರಕರಣ ಹೆತ್ತವರ ವಿರೋಧದಿಂದಾಗಿ ದುರಂತದಲ್ಲಿ ಅಂತ್ಯ ಕಂಡಿದೆ. ಪ್ರಿಯಕರನ ಜತೆ ಏಕಾಂತದಲ್ಲಿದಾಗ ತಂದೆ ನೋಡಿದರೆಂದು ಯುವತಿ ಆತ್ಮಹತ್ಯೆ ಮಾಡಿಕೊಂಡರೆ ಆಕೆಯ ತಂದೆ ಯುವಕನನ್ನು ಕೊಂದು ಎರಡೂ ಶವಗಳನ್ನು ಕೃಷ್ಣಾ ನದಿಗೆ ಎಸೆದಿರುವ ಘಟನೆ ತನಿಖೆಯಿಂದ ಹೊರಬಂದಿದೆ .

ಪ್ರಕರಣದ ವಿವರ ತಿಕೋಟಾ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಯುವತಿಯ ಅಪಹರಣ ಪ್ರಕರಣ ಯುವಕನ ದಾಖಲಾಗಿತ್ತು . ಹುಡುಕಾಡಿದಾಗ ಯುವಕನ ಶವ ನದಿಯಲ್ಲಿ ಸಿಕ್ಕಿದ್ದು, ತನಿಖೆ ಮುಂದುವರಿಸಿದಾಗ ಯುವತಿಯ ತಂದೆಯೇ ಕೊಂದು ನದಿಗೆಸೆದಿರುವುದು ತಿಳಿದುಬಂದಿದೆ.

ಪದವಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ತಿಕೋಟಾದ ಘೋಣಸಗಿ ಗ್ರಾಮದ ಯುವಕ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಕಳ್ಳಕವಟಗಿಯ ಯುವತಿ ಪ್ರೀತಿಸುತ್ತಿದ್ದರು.

ವಿಷಯ ತಿಳಿದಾಗ ಎರಡೂ ಮನೆಯವರು ಪಂಚಾಯಿತಿ ನಡೆಸಿ ಬುದ್ಧಿವಾದ ಹೇಳಿದ್ದಾರೆ. ಆದರೆ ಬುದ್ದಿಮಾತಿಗೆ ಪ್ರೇಮಿಗಳು ಬದಲಾಗಿರಲಿಲ್ಲ . ಒಂದು ದಿನ ಮಧ್ಯರಾತ್ರಿ ಯುವತಿಯು ತನ್ನ ಮನೆಯಲ್ಲಿ ಯುವಕನ ಜತೆ ಏಕಾಂತದಲ್ಲಿ ಆಕೆಯ ಇರುವುದನ್ನು ಕಂಡು ತಂದೆ ಆಕ್ರೋಶಗೊಂಡಿದ್ದಾನೆ . ಭೀತಿಯಿಂದ ಯುವತಿ ವಿಷ ಸೇವಿಸಿ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ . ಮಗಳ ಆತ್ಮಹತ್ಯೆಯಿಂದ ಕಂಗಾಲಾದ ತಂದೆ ಯುವಕನ ಕೈಕಾಲು ಕಟ್ಟಿ ಆತನಿಗೂ ವಿಷ ಕುಡಿಸಿ ಕೊಂದು ಹಾಕಿದ್ದಾನೆ.

ಬಳಿಕ ಆತ ಕೆಲವರೊಂದಿಗೆ ಸೇರಿ ಶವಗಳನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ಠಾಣ ವ್ಯಾಪ್ತಿಯಲ್ಲಿ ಕೃಷ್ಣಾ ನದಿಗೆ ಎಸೆದಿರುವುದು ತನಿಖೆಯಲ್ಲಿ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಗುರಪ್ಪ ಹಾಗೂ ಸಂಬಂಧಿ ಅಜಿತ್ ಎಂಬವರನ್ನು ಮಲ್ಲಪ್ಪ ಎಂಬವರನ್ನು ಬಂಧಿಸಿದ್ದು, ವೃದ್ಧನಿಗಾಗಿ ಶೋಧ ನಡೆಯುತ್ತಿದೆ.

- Advertisement -

Related news

error: Content is protected !!