Saturday, September 12, 2026
spot_imgspot_img
spot_imgspot_img

ವಿಟ್ಲದಲ್ಲಿ ಮಕ್ಕಳಿಗಾಗಿ “ಮಣ್ಣಿನ ಗಣಪತಿ” ಕಾರ್ಯಾಗಾರ: ದೃಷ್ಟಿ ಸ್ಕೂಲ್ ಆಫ್ ಆರ್ಟ್ ಆಯೋಜನೆ

- Advertisement -
- Advertisement -

ವಿಟ್ಲ: ಪರಿಸರ ಸ್ನೇಹಿ ಗಣೇಶೋತ್ಸವದ ಪರಿಕಲ್ಪನೆಯೊಂದಿಗೆ ದೃಷ್ಟಿ ಸ್ಕೂಲ್ ಆಫ್ ಆರ್ಟ್ ವತಿಯಿಂದ ಮಕ್ಕಳಿಗಾಗಿ ವಿಶೇಷ “ಮಣ್ಣಿನ ಗಣಪತಿ – ಭವಿಷ್ಯದ ಹಸ್ತಗಳಿಂದ” ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಈ ಕಾರ್ಯಾಗಾರವು ಸೆಪ್ಟೆಂಬರ್ 13, 2026 ಆದಿತ್ಯವಾರದಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00 ರವರೆಗೆ ವಿಟ್ಲದ ಶಾಲಾ ರಸ್ತೆಯಲ್ಲಿರುವ ಶ್ರೀ ವಿದ್ಯಾ ಟ್ಯೂಷನ್ ಸೆಂಟರ್‌ನಲ್ಲಿ ನಡೆಯಲಿದೆ.

5 ರಿಂದ 18 ವರ್ಷದೊಳಗಿನ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಭಾಗವಹಿಸುವ ಮಕ್ಕಳಿಗೆ ಮಣ್ಣು ಮತ್ತು ಅಗತ್ಯ ಸಾಮಗ್ರಿಗಳನ್ನು ಸಂಘಟಕರೇ ನೀಡಲಿದ್ದು, ಪರಿಣಿತರಿಂದ ತರಬೇತಿ ನೀಡಲಾಗುವುದು. ಮಕ್ಕಳು ತಾವೇ ತಯಾರಿಸಿದ ಗಣಪತಿ ಮೂರ್ತಿಯನ್ನು ಮನೆಗೆ ಕೊಂಡೊಯ್ದು ಪೂಜಿಸಬಹುದು.

ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಅಲ್ಲದೆ ಮನೆಯಲ್ಲಿ ಗಣಪತಿಯನ್ನು ಆಕರ್ಷಕವಾಗಿ ಅಲಂಕರಿಸಿ ಮೂರ್ತಿಯೊಂದಿಗೆ ಫೋಟೋ ಕಳುಹಿಸಿದವರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

ಪ್ರವೇಶ ಶುಲ್ಕ ಕೇವಲ ರೂ. 300/- (ಸಾಮಗ್ರಿ ಸೇರಿ). ಮೊದಲ 10 ನೋಂದಣಿಗೆ ಹಾಗೂ ಒಂದೇ ಮನೆಯ ಇಬ್ಬರು ಮಕ್ಕಳಿಗೆ ವಿಶೇಷ ರಿಯಾಯಿತಿ ಇದೆ.

ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ 8310814115, 6361183939 ನ್ನು ಸಂಪರ್ಕಿಸಬಹುದು.

.

- Advertisement -

Related news

error: Content is protected !!