Friday, June 27, 2025
spot_imgspot_img
spot_imgspot_img

ಮೂವರು ಮಹಿಳೆಯರನ್ನು ವಿವಾಹವಾಗಿ ವಂಚನೆ; ನಾಲ್ಕನೇ ಮದುವೆಗಾಗಿ ಪ್ರೇಯಸಿಯೊಂದಿಗೆ ಪರಾರಿ!

- Advertisement -
- Advertisement -

ಚಿಕ್ಕಮಗಳೂರು: ವ್ಯಕ್ತಿಯೋರ್ವ ಮೂರು ಮಹಿಳೆಯರನ್ನು ವಿವಾಹವಾಗಿ ವಂಚಿಸಿದ್ದಾನೆ. ಇದೀಗ ನಾಲ್ಕನೇ ಮದುವೆಯಾಗಲು ಸಿದ್ದನಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರೇಯಸಿಯೊಂದಿಗೆ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದಲ್ಲಿ ನಡೆದಿದೆ. ಆರೋಪಿ ಬಾಳೆಹೊನ್ನೂರು ನಿವಾಸಿ ಯೂಸುಫ್ ಹೈದರ್ ಎನ್ನಲಾಗಿದೆ.

ಮೂವರನ್ನು ಮದುವೆಯಾಗಿ ಪತ್ನಿಯರಿಗೆ ವಂಚಿಸಿದ ಆರೋಪಿ ಹೈದರ್ ತಾನು ಮಂತ್ರವಾದಿ ಎಂದು ಹೇಳಿಕೊಂಡು ಅಮಾಯಕರಿಗೆ ಮೋಸ ಮಾಡುತ್ತಿದ್ದಾನೆ ಎನ್ನಲಾಗಿದೆ.

ಈತನಿಂದ ಮೋಸ ಹೋದ ಪತ್ನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಕಳಸ ಪಟ್ಟಣದ ಯುವತಿಯೊಂದಿಗೆ ಎಸ್ಕೇಪ್ ಆಗಿದ್ದಾನೆ. ಸಕಲೇಶಪುರ, ಮೂಡಿಗೆರೆ ಹಾಗೂ ಆಲ್ದೂರಿನ ಮೂವರು ಮಹಿಳೆಯರನ್ನು ವಿವಾಹವಾಗಿ ವಂಚಿಸಿದ್ದು, ಹೈದರ್ ನನ್ನು ಬಂಧಿಸುವಂತೆ ಮೂರು ಪತ್ನಿಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!