Sunday, August 9, 2026
spot_imgspot_img
spot_imgspot_img

ಭಟ್ಕಳ: ಪೊಲೀಸರ ಮೇಲೆಯೇ ರೌಡಿಶೀಟರ್‌ ತಂಡದ ಚಾಕು ದಾಳಿ: ಇಬ್ಬರು ಸಿಬ್ಬಂದಿ ಗಂಭೀರ

- Advertisement -
- Advertisement -

ಭಟ್ಕಳ : ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಬಿಡಿಸಲು ತೆರಳಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಯುವಕನ ಮೇಲೆ ರೌಡಿಶೀಟರ್ ಮತ್ತು ಆತನ ಸಹಚರರು ಚಾಕುವಿನಿಂದ ದಾಳಿ ನಡೆಸಿದ ಘಟನೆ ಶನಿವಾರ ತಡರಾತ್ರಿ ಮುರ್ಡೇಶ್ವರದ ಪ್ರಮುಖ ಕಮಾನು ಬಳಿ ನಡೆದಿದೆ.

ದಾಳಿಯಲ್ಲಿ ಹವಲ್ದಾ‌ರ್ ಸಂಗಪ್ಪ ಹಾಗೂ ಕಾನ್‌ಸ್ಟೇಬಲ್ ವಿನಾಯಕ್ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಸ್ಥಳೀಯ ಯುವಕ ಮನೋಜ್ ಎಂಬಾತನಿಗೆ ಮುರುಡೇಶ್ವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಜಗಳದ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು, ಜಗಳ ಬಿಡಿಸಲು ಮುಂದಾದಾಗ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ರೌಡಿಶೀಟರ್ ರಾಜು, ರಿತಿಕ್, ಮದನ್ ನಾಯ್ಕ ಯೋಗೇಶ್ ಹಾಗೂ ದರ್ಶನ್ ವಿರುದ್ಧ ಮುರುಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!