- Advertisement -
- Advertisement -





ಮಂಜೇಶ್ವರ : ವರ್ಕಾಡಿ ನೀರೊಳಿಗೆಯಲ್ಲಿನ ಶ್ರೀಮಾತಾ ಬಾಲಿಕಾಶ್ರಮ ಟ್ರಸ್ಟ್ ನ ಹಾಸ್ಟೆಲ್ ನಿಂದ ಇಬ್ಬರು ಬಾಲಕಿಯರು ನಾಪತ್ತೆಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಉರ್ಡೂರು ಮಣಿಯೂರಿನ ಅಮೃತಾ ( 15) ಮತ್ತು ಕಾಸರಗೋಡು ಕೇಳುಗುಡ್ಡೆಯ ಕೆ.ಸಿ ಅನನ್ಯಾ ( 14) ನಾಪತ್ತೆಯಾದವರು.
ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ಸಂಜೆ ಏಳು ಗಂಟೆ ಬಳಿಕ ಇಬ್ಬರೂ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಯರ ಬಗ್ಗೆ ಮಾಹಿತಿ ಲಭಿಸಿದ್ದಲ್ಲಿ ಮಂಜೇಶ್ವರ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
- Advertisement -








