Friday, May 3, 2024
spot_imgspot_img
spot_imgspot_img

ಸಿಡಿಲು ಬಡಿದು 9 ಕುರಿಗಳು ಮೃತ್ಯು

- Advertisement -G L Acharya panikkar
- Advertisement -

ರಾಜ್ಯದಕ್ಕೆ ಮಳೆ ಪ್ರವೇಶಿಸಿದ್ದು ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಮಳೆಯಿಂದ ಅಪಾರ ಹಾನಿಯಾಗುತ್ತಿದೆ. ಸಿಡಿಲು ಬಡಿದು ೯ ಕುರಿಗಳು ಮೃತಪಟ್ಟ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು 9 ಕುರಿ ಮೃತಪಟ್ಟಿದೆ.

ಹನಮಂತ ನಾಯ್ಕರ್ ಮತ್ತು ಹನಮಂತ ಚೂರಿ ಎಂಬುವವರ ಕುರಿಗಳು ಮೃತಪಟ್ಟಿವೆ. ಜಮೀನಿನಲ್ಲಿ ಕುರಿಗಳನ್ನು ಮೇಯಲು ಬಿಡಲಾಗಿತ್ತು. ಈ ವೇಳೆ ಮರಕ್ಕೆ ಸಿಡಿಲು ಬಡಿದಿದೆ, ಸಿಡಿಲಿನ ತೀವ್ರತೆಗೆ ಮರದ ಬಳಿ ಇದ್ದ 9 ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!