Saturday, June 28, 2025
spot_imgspot_img
spot_imgspot_img

ಬಂಟ್ವಾಳ: ಕಾರ್ಮೆಲ್ ಕಾಲೇಜಿನ NSS ಘಟಕದ ವತಿಯಿಂದ ಮಕ್ಕಳಿಗೆ ಸ್ವ ಉದ್ಯೋಗದ ಬಗ್ಗೆ ಮಾಹಿತಿ; ಕೇಪು ಸುಧಾಕರ ಪೂಜಾರಿಯವರ ಮನೆಗೆ ಭೇಟಿ

- Advertisement -
- Advertisement -

ಕಾರ್ಮೆಲ್ ಕಾಲೇಜು ಮೊಡಂಕಾಪು ಬಂಟ್ವಾಳ, NSS ಘಟಕದ ವತಿಯಿಂದ ಮಕ್ಕಳಿಗೆ ಸ್ವ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡುವ ಉದ್ದೇಶದಿಂದ ಬಂಟ್ವಾಳ ತಾಲೂಕು ಕೇಪು ಗ್ರಾಮದ ರಾಜ್ಯಮಟ್ಟದ ಪ್ರಶಸ್ತಿ ವಿಜೇತ, ಪ್ರಾಪ್ತಿ ಎಂಟರ್ ರ್ಪ್ರೈಸಸ್ ಮಾಲಕ ಹಾಗೂ ಪ್ರಗತಿ ಪರ ಜೇನು ಕೃಷಿಕ ಸುಧಾಕರ ಪೂಜಾರಿಯವರ ಮನೆಗೆ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಜೇನು ಕೃಷಿಯ ಬಗ್ಗೆ ಶಿಕ್ಷಕ ಕೃಷ್ಣ ಮಾಣಿ ಇವರು ಸಂಪೂರ್ಣ ಮಾಹಿತಿಯನ್ನು ನೀಡಿದರು. ಕಾಲೇಜಿನ 45 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಲತಾ ಫೆರ್ನಾಂಡಿಸ್ ಎ ಸಿ, NSS ಯೋಜನಾಧಿಕಾರಿ ಕೀರ್ತನ್ ನಾಯ್ಕ್, ಉಪನ್ಯಾಸಕರಾದ ಕು. ವಿಜೇತ ಕುಲಾಲ್, ಕು. ನಿಹಾರಿಕಾ ಶೆಟ್ಟಿ ಹಾಗೂ ಜೇನು ಕೃಷಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!