- Advertisement -
- Advertisement -
ಪುತ್ತೂರು: ಮಗನ ಮೆಹೆಂದಿ ದಿನವೇ ತಂದೆ ದಿಢೀರ್ ನಾಪತ್ತೆಯಾದ ಘಟನೆ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ. ಜು.1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರಿನಲ್ಲಿದ್ದ ಇವರು ಬಳಿಕ ನಾಪತ್ತೆಯಾಗಿದ್ದು ಮೊಬೈಲ್ ಸ್ವಿಚ್ ಆಫ್ ಆಗಿದೆ.
ಜು. 2 ರಂದು ನಡೆಯಬೇಕಿದ್ದ ಮದರಂಗಿ ಶಾಸ್ತ್ರ ಅಪ್ಪನಿಲ್ಲದ ಕಾರಣಕ್ಕೆ ಮಗ ರದ್ದು ಮಾಡಿದ್ದಾರೆ. ಮನೆಯ ಯಜಮಾನ ಧಿಡೀರಣೆ ನಾಪತ್ತೆಯಾಗಿರುವುದು ಮತ್ತು ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಪೊಲೀಸರು ಅವರ ಮೊಬೈಲ್ ಆಧಾರದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
- Advertisement -