Saturday, June 28, 2025
spot_imgspot_img
spot_imgspot_img

ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಅಂಕ; ವಿದ್ಯಾರ್ಥಿ ಕೆರೆಗೆ ಹಾರಿ ಆತ್ಮಹತ್ಯೆ

- Advertisement -
- Advertisement -

ವೈದ್ಯನಾಗಬೇಕೆಂಬ ಕನಸು ಕಂಡಿದ್ದ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಶಿಡ್ಲಘಟ್ಟ ‌ನಗರದ ನಿವಾಸಿ ನಯಾಜ್ ಪಾಷ ಮೃತ ದುರ್ದೈವಿ.

ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು. ಇದರಿಂದ ನಯಾಜ್‌ ಪಾಷ ತೀವ್ರವಾಗಿ ನೊಂದಿದ್ದ. ಮನೆಯಲ್ಲಿ ಮಂಕಾಗಿ ಕುಳಿತಿರುತ್ತಿದ್ದ. ಇದೇ ವಿಚಾರವಾಗಿ ನಿನ್ನೆ ರಾತ್ರಿ ಕುಟುಂಬಸ್ಥರೊಂದಿಗೆ ಗಲಾಟೆ ಮಾಡಿಕೊಂಡಿದ್ದ.

ಕಡಿಮೆ ಅಂಕ ಬಂದಿದ್ದು ಭಾರಿ ನೋವನ್ನು ತಂದಿತ್ತು. ಹೀಗಾಗಿ ಮನನೊಂದು ಶಿಡ್ಲಘಟ್ಟ ನಗರದ ಅಮ್ಮನ ಕೆರೆಗೆ ಹಾರಿ ಮೃತಪಟ್ಟಿದ್ದಾನೆ. ವೈದ್ಯನಾಗಬೇಕೆಂಬ ಆಸೆ ಆತನೊಂದಿಗೆ ಕೆರೆಯಲ್ಲಿ ಕೊಚ್ಚಿ ಹೋಗಿದೆ. ರಾತ್ರಿ ಮನೆಯಿಂದ ಸಿಟ್ಟಿನಿಂದ ಹೊರಟ ಮಗ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!