- Advertisement -
- Advertisement -




ವಿಟ್ಲ: ವಿಟ್ಲ-ಮಂಗಳೂರು ರಸ್ತೆಯ ಶ್ರೀರಾಮಮಂದಿರ ಬಳಿ ಶ್ರೀಕೃಷ್ಣ ಕಲಾಮಂದಿರ ಶಾಂತಿನಗರದಲ್ಲಿ ನೂತನವಾಗಿ ಆರಂಭವಾದ ಮಾತೃಶ್ರೀ ಬೇಬಿ ಸಿಟ್ಟಿಂಗ್ ಇಂದು ಶುಭಾರಂಭಗೊಂಡಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಧರ್ಮವತಿ ದೇವರಮನೆ ಬೇಬಿ ಸಿಟ್ಟಿಂಗ್ ಅನ್ನು ಉದ್ಘಾಟಿಸಿದರು. ಗೌಡ ಸಂಘದ ಮಾಜಿ ಅಧ್ಯಕ್ಷ ಲಿಂಗಪ್ಪ ಗೌಡ ಅಳಿಕೆ ದೀಪ ಬೆಳಗಿಸಿದರು. ಕಾರ್ಯಕ್ರಮದಲ್ಲಿ ಕನ್ಯಾನ ಸಿಆರ್ಪಿ ಚಂದ್ರಶೇಖರ್, ವೇಣುಗೋಪಾಲ್ ಮರುವಾಳ ಉಪಸ್ಥಿತರಿದ್ದರು.

ವೇದಾವತಿ ಮತ್ತು ಶೇಖರ ಗೌಡ ಮರುವಾಳ ಇವರ ನೇತೃತ್ವದ ಪ್ರಪ್ರಥಮವಾಗಿ ವಿಟ್ಲದಲ್ಲಿ ಶುಭಾರಂಭಗೊಂಡ ಮಾತೃಶ್ರೀ ಬೇಬಿ ಸಿಟ್ಟಿಂಗ್ ಬೆಳಿಗ್ಗೆ ಗಂಟೆ 9ರಿಂದ ಸಂಜೆ 5ರ ವರೆಗೆ ಬೇಬಿ ಸಿಟ್ಟಿಂಗ್ ಕಾರ್ಯ ನಿರ್ವಹಿಸಲಿದೆ. 8 ತಿಂಗಳಿನಿಂದ 2.5ವರ್ಷದ ವರೆಗಿನ ಮಕ್ಕಳನ್ನು ದಾಖಲಾತಿ ಮಾಡಬಹುದು.

- Advertisement -