


ಚುನಾವಣಾ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಲೋ ಬಿಪಿಯಿಂದ ರೈಲಿನಲ್ಲಿ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮ ಹೋಮ್ ಗಾರ್ಡ್ ಸಿದ್ದು ಎಂದು ಗುರುತಿಸಲಾಗಿದೆ.
ಮಧ್ಯಪ್ರದೇಶಲ್ಲಿ ಎಲೆಕ್ಷನ್ ಕೆಲಸ ಮುಗಿದಿದ್ದರಿಂದ ಹೋಮ್ಗಾರ್ಡ್ಗಳ ಜೊತೆ ಸಿದ್ದು ಕೂಡ ಕರ್ನಾಟಕಕ್ಕೆ ರೈಲಿನ ಮೂಲಕ ವಾಪಸ್ ಆಗುತ್ತಿದ್ದರು. ಬೆಂಗಳೂರಿಗೆ ಬರುವ ರೈಲಿನಲ್ಲಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಲೋ ಬಿಪಿಯಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ನಗರದ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಅಷ್ಟೋತ್ತಿಗೆ ಜೀವ ಹೋಗಿತ್ತು. ಬೆಂಗಳೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅವರ ಸ್ವಗ್ರಾಮಕ್ಕೆ ಮೃತದೇಹ ರವಾನೆ ಮಾಡಲಾಗಿತ್ತು.
ಎಲೆಕ್ಷನ್ ಹಿನ್ನೆಲೆಯಲ್ಲಿ ರಾಜ್ಯದಿಂದ ಒಟ್ಟು 4 ಸಾವಿರ ಹೋಮ್ ಗಾರ್ಡ್ಗಳನ್ನು ಕಳುಹಿಸಲಾಗಿತ್ತು. ಇದರಲ್ಲಿ ಮಂಡ್ಯದಿಂದ ಮಾತ್ರ 200 ಹೋಮ್ ಗಾರ್ಡ್ಗಳ ಚುನಾವಣಾ ಕರ್ತವ್ಯಕ್ಕೆ ಹೋಗಿದ್ದರು. ಈ 200 ಸಿಬ್ಬಂದಿಯಲ್ಲಿ ಮೃತ ಸಿದ್ದು ಕೂಡ ಒಬ್ಬರಾಗಿದ್ದರು. ಎಲೆಕ್ಷನ್ ಮುಗಿದಿದ್ದರೂ ಕರ್ನಾಟಕದ ಹೋಮ್ ಗಾರ್ಡ್ಗಳನ್ನು ವಾಪಸ್ ಕಳುಹಿಸಿ ಕೊಡಲು ಮಧ್ಯಪ್ರದೇಶದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದರಿಂದ ಹೋಮ್ ಗಾರ್ಡ್ಗಳು ರಾಜ್ಯಕ್ಕೆ ವಾಪಸ್ ಆಗಲು ಪರದಾಡಿದ್ದರು.