Sunday, June 29, 2025
spot_imgspot_img
spot_imgspot_img

ದೇಗುಲ ದರ್ಶನಕ್ಕೆ ಬಂದಿದ್ದ ಬಾಲಕ ನೀರು ಪಾಲು..!

- Advertisement -
- Advertisement -

ಗೌರಿ ಹುಣ್ಣಿಮೆ ಹಿನ್ನೆಲೆಯಲ್ಲಿ ಹುಲಿಗೆಮ್ಮ ದರ್ಶನಕ್ಕೆ ಬಂದಿದ್ದ ಬಾಲಕ ನೀರು ಪಾಲಾದ ಘಟನೆ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕನಕಪ್ಪ ಈರಪ್ಪ ಮಾದರ್ (17) ತುಂಗಭದ್ರಾ ನದಿಯಲ್ಲಿ ನಾಪತ್ತೆ ಆಗಿದ್ದಾನೆ.

ಗೌರಿ ಹುಣ್ಣಿಮೆಯ ಪ್ರಯುಕ್ತ ಕನಕಪ್ಪ ಈರಪ್ಪ ಮಾದರ್, ಹುಲಿಗೆಮ್ಮ ದೇವಸ್ಥಾನಕ್ಕೆ ಬಂದಿದ್ದ. ತುಂಗಾಭದ್ರ ನದಿಯಲ್ಲಿ ಈಜಲು ಹೋದಾಗ ನೀರು ಪಾಲಾಗಿದ್ದಾನೆ. ಈರಪ್ಪ ಮಾದರ್, ಯಲಬುರ್ಗಾ ತಾಲೂಕಿನ ಕುದುರಿ ಕೊಟಿಗೆ ಗ್ರಾಮದವ ಎನ್ನಲಾಗಿದೆ.

ತಡರಾತ್ರಿಯವರೆಗೆ ಶೋಧ ಕಾರ್ಯ ಮುಂದುವರಿದಿದೆ. ಆದರೆ ಬಾಲಕ ಇನ್ನೂ ಪತ್ತೆಯಾಗಿಲ್ಲ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!