Saturday, June 28, 2025
spot_imgspot_img
spot_imgspot_img

ಪುತ್ತೂರು: ಜೆಸಿಬಿ ಆಪರೇಟರ್ ಹನುಮಂತ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಇಬ್ಬರು ಆರೋಪಿಗಳು ಅರೆಸ್ಟ್ ..! ಘಾಟ್ ಮಧ್ಯೆ ಕೊಲೆ ಮಾಡಿ ಬಿಸಾಡಿರುವ ಶಂಕೆ…!

- Advertisement -
- Advertisement -

ಪುತ್ತೂರು: ಸುಮಾರು ಹತ್ತಕ್ಕೂ ಅಧಿಕ ಜೆಸಿಬಿ ಹೊಂದಿರುವ ಕುಂಬ್ರದ ಉದ್ಯಮಿಯೋರ್ವರ ಜೆಸಿಬಿ ಆಪರೇಟರ್ ಕಿಡ್ನಾಪ್ ಪ್ರಕರಣದ ಬಗ್ಗೆ ಬಿಗ್ ಟ್ವಿಸ್ಟ್ ಬೆಳಕಿಗೆ ಬಂದಿದೆ.

ಕುಂಬ್ರ ಮೂಲದ ಜೆಸಿಬಿ ಮಾಲಕ, ಉದ್ಯಮಿ ಮೋಹನ್‌ದಾಸ್ ರೈ ಜೊತೆ ಜೇಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಹನುಮಂತ (22) ಎಂಬವನ ಕಿಡ್ನಾಪ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರಕಿದೆ.

ಕೆಲ ದಿನಗಳ ಹಿಂದೆ ಹನುಮಂತ ನಾಪತ್ತೆಯಾಗಿದ್ದು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಮುಂದುವರೆಸಿದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ (ಸಂಪ್ಯ ಠಾಣಾ) ಪ್ರಭಾರ ಠಾಣಾಧಿಕಾರಿ ರವಿ ಬಿ.ಎಸ್ ಇವರ ನೇತೃತ್ವದ ವಿಶೇಷ ತಂಡ ಈ ಪ್ರಕರಣದ ಬೆನ್ನು ಹಿಡಿದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದೀಗ ಈ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಕಂಡುಬಂದಿದ್ದು ಹನುಮಂತನನ್ನು ಘಾಟ್ ಮಧ್ಯೆ ಕೊಲೆ ಮಾಡಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!