Sunday, June 29, 2025
spot_imgspot_img
spot_imgspot_img

ಗೃಹಲಕ್ಷ್ಮಿ ಹಣ ತೆಗೆಯಲು ಹೋಗುತ್ತೇನೆ ಎಂದು ಮನೆಯಿಂದ ಹೊರಟ ಮಹಿಳೆ ನಾಪತ್ತೆ

- Advertisement -
- Advertisement -

ಗೃಹಲಕ್ಷ್ಮಿ ಹಣ ತೆಗೆಯಲು ಹೋಗುತ್ತೇನೆ ಎಂದು ಮನೆಯಿಂದ ಹೋದ ಮಹಿಳೆ ನಾಪತ್ತೆಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಬಳಿ ನಡೆದಿದೆ.
ನಾಪತ್ತೆಯಾದ ಮಹಿಳೆ ರಂಜದಕಟ್ಟೆಯ ಮುಳುಬಾಗಿಲು ಗ್ರಾಮದ ಪಾರ್ವತಿ (60) ಎಂದು ಗುರುತಿಸಲಾಗಿದೆ.

ಪಾರ್ವತಿ ಎಂಬವರು ಮಾನಸಿಕ ಅಸ್ವಸ್ಥೆ ಹಾಗೂ ಅಂಗವಿಕಲೆಯಾಗಿದ್ದು, ಕಳೆದ ಮಂಗಳವಾರ ಮನೆಯಿಂದ ಗೃಹಲಕ್ಷ್ಮಿ ಹಣ ತೆಗೆಯಲು ಹೋಗುತ್ತೇನೆ ಎಂದು ನಡೆದುಕೊಂಡು ಹೋದವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಿದ್ದಾರೆ. ಎಲ್ಲಿಯೂ ಅವರ ಸುಳಿವು ಸಿಗದೇ ಇದ್ದಾಗ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!