- Advertisement -
- Advertisement -
ಬೆಳ್ತಂಗಡಿ: ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಉಜಿರೆ ಗ್ರಾಮದ ಹಲಕ್ಕೆ ಮನೆಯ ಸಿಲ್ವೆಸ್ಟರ್ ರೋಗ್ರಿಗಸ್ ಅವರ ಪುತ್ರ ವಿಲ್ಸನ್ ರೋಡ್ರಿಗಸ್ (34) ಎಂದು ಗುರುತಿಸಲಾಗಿದೆ.
ಇವರು ಗುಜರಾತ್ನಲ್ಲಿ ಉದ್ಯೋಗದಲ್ಲಿದ್ದರು. ಶನಿವಾರ ಊರಿಗೆ ಬರಲೆಂದು ಅವರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿಯೇ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಫಲಿಸದೆ ಮೃತಪಟ್ಟಿದದ್ದಾರೆ.
- Advertisement -