Saturday, June 28, 2025
spot_imgspot_img
spot_imgspot_img

ವಿಟ್ಲ: ಕಾಪುಮಜಲು ಕೋಟಿ ಶ್ರೀರಾಮ ಮಂತ್ರ ಪಠಣ ಸಮಾಪ್ತಿ ಕಾರ್ಯಕ್ರಮ ಮತ್ತು ಶ್ರೀ ರಾಮ ಕಲ್ಪೋಕ್ತ ಪೂಜೆ

- Advertisement -
- Advertisement -

ವಿಟ್ಲ: ಶ್ರೀ ಮಲರಾಯಿ ಭಜನಾ ಮಂಡಳಿ(ರಿ.) ಹಾಗೂ ಮಹಿಳಾ ಭಜನಾ ಮಂಡಳಿ ಕಾಪುಮಜಲು ಕೊಡಂಗಾಯಿ ಇಲ್ಲಿ ಕೋಟಿ ಶ್ರೀರಾಮ ಮಂತ್ರ ಪಠಣ ಸಮಾಪ್ತಿ ಕಾರ್ಯಕ್ರಮ ಮತ್ತು ಶ್ರೀ ರಾಮ ಕಲ್ಪೋಕ್ತ ಪೂಜೆಯು ಜ.12 ರಂದು ನಡೆಯಿತು.

ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಕಾಪುಮಜಲು ಶ್ರೀ ಮಲರಾಯಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಭುಜಂಗ ರೈ ಪಡಾರುಗುತ್ತು, ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಮುಕ್ತಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಕರಿಂಜೆ ಆಶೀರ್ವಚನ ನೀಡಿದರು. ಧಾರ್ಮಿಕ ಮುಂದಾಳು ಕಶ್ಯಕೋಡಿ ಸೂರ್‍ಯನಾರಾಯಣ ಭಟ್ ಇವರು ಧಾರ್ಮಿಕ ಭಾಷಣ ಮಾಡಿದರು. ಶ್ರೀರಾಮ್ ಭಟ್ ಮತ್ತು ಶ್ರೀರಾಮ್ ಗಣೇಶ್ ಮಂಗಳೂರು ಇವರು ಪ್ರವಚನ ನೀಡಿದರು. ಕಾಪುಮಜಲು ಶ್ರೀಮಲರಾಯಿ ಭಜನಾ ಮಂಡಳಿ ಅಧ್ಯಕ್ಷರಾದ ಅರವಿಂದ ರೈ ಮೂರ್ಜೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಂಜಿಗದ್ದೆ ಪಂಚಮಿ ಗ್ರೂಪ್ಸ್ ನ ಸತೀಶ್ ಭಟ್ ಪಂಜಿಗದ್ದೆ, ಬಂಟ್ವಾಳ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಪದ್ಮಶ್ರೀ ಸತ್ತಿಕಲ್ಲು ಭಾಗವಹಿಸಿದ್ದರು.

ವೈಭವ್ ಕಾಪುಮಜಲು ಪ್ರಾರ್ಥಿಸಿ, ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿ, ಗೋಪಾಲ ಜೋಗಿ ಕಾಪುಮಜಲು ಪ್ರಾಸ್ತಾವಿಕವಾ ಮಾತನಾಡಿದರು. ನಿವೃತ್ತ ಅಂಚೆಪಾಲಕ ಶ್ರೀ ಕೃಷ್ಣಪ್ಪ ಮಡಿವಾಳ ಇವರನ್ನು ಗೌರವಿಸಲಾಗಿದೆ. ಗಣೇಶ್ ಶೆಟ್ಟಿ ಬಾರೆಬೆಟ್ಟು ನಿರೂಪಣೆಗೈದು, ಚರಣ್ ಕಾಪುಮಜಲು ವಂದಿಸಿದರು.

- Advertisement -

Related news

error: Content is protected !!