- Advertisement -
- Advertisement -
ಕುಂದಾಪುರ: ಜುಪಿಟರ್ ಸ್ಕೂಟರ್ ಸ್ಕಿಡ್ ಆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕೋಟೇಶ್ವರ ಸಮೀಪದ ಶಿರಿಯಾರ ದಬ್ಬೆಕಟ್ಟೆ ರಸ್ತೆಯ ಕೊರ್ಗಿಯ ಪಂಚಾಯತ್ ಎದುರುಗಡೆಯಲ್ಲಿ ನಡೆದಿದೆ.
ಅವಿವಾಹಿತರಾಗಿದ್ದು ಕೊರ್ಗಿಯ ಕೋಣಟ್ಟು ನಿವಾಸಿ ಮೃತಪಟ್ಟ ಬೈಕ್ ಸವಾರ ಸಂದೀಪ್ ಶೆಟ್ಟಿ(31) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ 8:00 ಗಂಟೆಯ ಸುಮಾರಿಗೆ ಅವರು ಡ್ರೈವಿಂಗ್ ಕೆಲಸ ಮುಗಿಸಿಕೊಂಡು ಸ್ಕೂಟರಿನಲ್ಲಿ ತನ್ನ ಮನೆಗೆ ತೆರಳುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್ ಸ್ಕಿಡ್ ಆದ ಪರಿಣಾಮ ಇವರು ಎಂಬುವವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -